ADVERTISEMENT

ಮಾಗಡಿ ರಂಗನಾಥ ಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪೂಜೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 23:33 IST
Last Updated 24 ಆಗಸ್ಟ್ 2024, 23:33 IST
<div class="paragraphs"><p>ಮಾಗಡಿ ರಂಗನಾಥ ಸ್ವಾಮಿ</p></div>

ಮಾಗಡಿ ರಂಗನಾಥ ಸ್ವಾಮಿ

   

ಚಿತ್ರಕೃಪೆ: wikipedia

ಮಾಗಡಿ: ಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಶನಿವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ 3.30ರ ಸುಮಾರಿಗೆ ನಾಲ್ವರು ಸಂಬಂಧಿಕರೊಂದಿಗೆ ಕಾರಿನಲ್ಲಿ ದೇವಸ್ಥಾನಕ್ಕೆ ಬಂದ ಅವರು, ಸಾಮಾನ್ಯ ಭಕ್ತರಂತೆ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.

ADVERTISEMENT

ಮೂರನೇ ಶ್ರಾವಣ ಶನಿವಾರವಾದ ಇಂದು ಪುಷ್ಪಯಾಗ ಸೇವೆ ಹಮ್ಮಿಕೊಳ್ಳಲಾಗಿತ್ತು. ದೇವರಿಗೆ ಪುಷ್ಪದಲ್ಲಿ ವಿಶೇಷ ಅಲಂಕಾರ ಮಾಡಿ ಪೂಜೆ ಮಾಡಲಾಗಿತ್ತು. ಮಧ್ಯಾಹ್ನ ದೇವಸ್ಥಾನಕ್ಕೆ ಬಂದ ಪಾರ್ವತಿ ಅವರು ವಿಶೇಷ ಪೂಜೆ ಮಾಡಿಸಿದ ಬಳಿಕ, ಪ್ರದಕ್ಷಿಣೆ ಹಾಕಿ ಹೊರಟರು ಎಂದು ದೇವಸ್ಥಾನದ ಇಒ ಜಗದೀಶ್ ತಿಳಿಸಿದರು.

‘ರಂಗನಾಥಸ್ವಾಮಿ ಭಕ್ತರಾದ ಪಾರ್ವತಿ ಅವರು ಕಳೆದ ಶಾವಣ ಮಾಸದಲ್ಲೂ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅದರಂತೆ ಈ ಬಾರಿಯೂ ಬಂದಿದ್ದಾರೆ. ಅವರು ಬರುವ ವಿಷಯ ಯಾರಿಗೂ ತಿಳಿಸಿರಲಿಲ್ಲ. ದೇವಸ್ಥಾನಕ್ಕೆ ಬಂದ ಅವರು 15 ನಿಮಿಷದೊಳಗೆ ಹೊರಟರು’ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಮೈಸೂರಿನ ಮುಡಾ ಹಗರಣ ಬೆಳಕಿಗೆ ಬಂದ ಬಳಿಕ, ಪಾರ್ವತಿ ಅವರು ಮೊದಲ ಬಾರಿಗೆ ಖಾಸಗಿ ಭೇಟಿ ನಿಮಿತ್ತ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.