ರಾಮನಗರ: ತಾಲ್ಲೂಕಿನ ಚಿಕ್ಕಗಂಗವಾಡಿ ಗ್ರಾಮದಲ್ಲಿ ಶನಿವಾರ ಐದು ರಾಗಿ ಬಣವೆಗಳು ಬೆಂಕಿಗೆ ಆಹುತಿ ಆಗಿವೆ.
ಗ್ರಾಮದ ಶಿವರುದ್ರಪ್ಪ, ದೊಡ್ಡವೀರಯ್ಯ ಎಂಬುವರಿಗೆ ಸೇರಿದ ರಾಗಿ ಬೆಳೆಯನ್ನು ರೈತರು ಒಕ್ಕಣೆ ಮಾಡುವ ಸಲುವಾಗಿ ಕಣದಲ್ಲಿ ಮೆದೆ ಹಾಕಿದ್ದರು. ಕಿಡಿಗೇಡಿಗಳು ಮುಂಜಾನೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ರಾಗಿ ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.