ಚನ್ನಪಟ್ಟಣ: ತಾಲ್ಲೂಕಿನ ಹನಿಯೂರು ಗ್ರಾಮದ ಬೀರೇಶ್ವರ ಯುವಕ ಸಂಘದಿಂದ ಬೀರೇಶ್ವರ ಮಠದ ಮನೆಯಲ್ಲಿ ಸೋಮವಾರ ಕನಕ ಜಯಂತಿ ಆಚರಿಸಲಾಯಿತು.
ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಿದ ಕನಕದಾಸರು ಸಮಾಜ ಪರಿವರ್ತನೆಗೆ ಶ್ರಮಿಸಿದ ರೀತಿ ಅನನ್ಯ ಎಂದು ಗ್ರಾ.ಪಂ.ಅಧ್ಯಕ್ಷ ಎಚ್.ಬಿ. ಬೀರೇಶ್ ಪ್ರಶಂಸಿಸಿದರು.
ಗ್ರಾಮಸ್ಥರಾದ ಪೂಜಾರಿ ತಮ್ಮಣ್ಣ, ದೇವರಾಜು, ಪೊಲೀಸ್ ಕೆಂಪಯ್ಯ, ಮಾಸ್ಟರ್ ಅಪ್ಪಾಜಿ, ಪಾವಡಿ ಕುಮಾರ್, ಮಧು, ಎಚ್.ಡಿ. ಕುಮಾರ, ದೊಡ್ಡಬೀರಯ್ಯ, ಅಪ್ಪಾಜಿ ಗೌಡ, ಶಿವಹುಚ್ಚಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.