ADVERTISEMENT

ಪ್ರಜಾವಾಣಿ ನ್ಯೂಸ್‌ ಕ್ವಿಜ್‌: ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 2:28 IST
Last Updated 25 ಜನವರಿ 2021, 2:28 IST
‘ಪ್ರಜಾವಾಣಿ’ ನ್ಯೂಸ್‌ ಕ್ವಿಜ್‌ನಲ್ಲಿ ವಿಜೇತರಾದ ಮಂಜುನಾಥ್
‘ಪ್ರಜಾವಾಣಿ’ ನ್ಯೂಸ್‌ ಕ್ವಿಜ್‌ನಲ್ಲಿ ವಿಜೇತರಾದ ಮಂಜುನಾಥ್   

ಕನಕಪುರ: ಕ್ವಿಜ್‌ ಪ್ರಶ್ನೆಗಳಿಗೆ ಉತ್ತರಿಸಲು ‘ಪ್ರಜಾವಾಣಿ’ ಪತ್ರಿಕೆ ಓದು ಸಾಕಷ್ಟು ಉಪಯುಕ್ತವಾಯಿತು. ಇದರಿಂದ ಜ್ಞಾನ ಹೆಚ್ಚಾಯಿತು ಎಂದು ಕ್ವಿಜ್‌ ವಿಜೇತ ಶಿಕ್ಷಕ ಮಂಜುನಾಥ್‌ ತಿಳಿಸಿದರು.

‘ಪ್ರಜಾವಾಣಿ’ ಪತ್ರಿಕೆಯಲ್ಲಿ ಬರುತ್ತಿದ್ದ ನ್ಯೂಸ್‌ ಕ್ವಿಜ್‌ನಲ್ಲಿ ಪಾಲ್ಗೊಂಡು ವಿಜೇತರಾಗಿ ಬಹುಮಾನ ಸ್ವೀಕರಿಸಿದ ಅನುಭವ ಹಂಚಿಕೊಂಡರು.

ಅವರು 8ನೇ ತರಗತಿಯಿಂದಲೇ ‘ಪ್ರಜಾವಾಣಿ’ ನಿರಂತರ ಓದುಗರು. ನ್ಯೂಸ್‌ ಕ್ವಿಜ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜೇತರಾಗಿದ್ದಾರೆ. ಮಂಜುನಾಥ್‌ ಅವರಿಗೆ ಸಂಸ್ಥೆಯ ಪ್ರಸಾರಾಂಗ ಪ್ರತಿನಿಧಿ ಮಹೇಶ್‌ ಮತ್ತು ವಿತರಕ ನರಸಿಂಹಮೂರ್ತಿ ಬಹುಮಾನ ವಿತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.