ADVERTISEMENT

ರಾಮನಗರದಲ್ಲಿ ಅಪಘಾತ: ಪಬ್ಲಿಕ್ ಟಿವಿ ವರದಿಗಾರ ಸಾವು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 11:58 IST
Last Updated 21 ಏಪ್ರಿಲ್ 2020, 11:58 IST
   

ರಾಮನಗರ: ನಗರದ ಜಿಲ್ಲಾ ಕಾರಾಗೃಹದ ಮುಂಭಾಗ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಪಬ್ಲಿಕ್ ಟಿವಿ ಸುದ್ದಿವಾಹಿನಿ ವರದಿಗಾರ ಹನುಮಂತ (32) ಮೃತಪಟ್ಟರು.

ಅವರು ವರದಿಗಾರಿಕೆ ಮುಗಿಸಿ ಜೈಲಿನಿಂದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಹೊರಟಿದ್ದ ವೇಳೆ ಎಟಿಎಂಗೆ ನಗದು ಪೂರೈಸುವ ವಾಹನ ಡಿಕ್ಕಿಯಾಯಿತು. ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಅಸುನೀಗಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ‌ಮರಣೋತ್ತರ ಪರೀಕ್ಷೆ ನಡೆಯಿತು. ಅವರ ಸ್ವಗ್ರಾಮವಾದ ಕನಕಪುರ ತಾಲ್ಲೂಕಿನ ಪಡವಣಗೆರೆಯಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.