ADVERTISEMENT

ರಾಮನಗರ | ಬಾರ್‌ನಲ್ಲಿ ಗಲಾಟೆ: ಕೂಗಾಡಬೇಡ ಎಂದಿದ್ದಕ್ಕೆ ಚಾಕು ಹಾಕಿದರು!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 3:09 IST
Last Updated 12 ಡಿಸೆಂಬರ್ 2025, 3:09 IST
ಎನ್. ಪ್ರಸನ್ನ 
ಎನ್. ಪ್ರಸನ್ನ    

ರಾಮನಗರ: ಮದ್ಯ ಕುಡಿಯುವಾಗ ನಡೆದ ಜಗಳದಲ್ಲಿ ಕಾರು ಚಾಲಕ ತಿಲಕ್ ಎಂಬುವರಿಗೆ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದ ಇಬ್ಬರನ್ನು ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ವಸಂತಪುರದ ಎನ್. ಪ್ರಸನ್ನ ಅಲಿಯಾಸ್ ಕುರುಪು ಹಾಗೂ ತಾತಗುಣಿಯ ಸಚಿನ್ ಎಂ. ಬಂಧಿತ ಆರೋಪಿಗಳು.

ತಿಲಕ್ ತನ್ನ ಸ್ನೇಹಿತ ಅನಿಲ್ ಕುಮಾರ್ ಅವರೊಂದಿಗೆ ಡಿ. 1ರಂದು ಕೆಂಗೇರಿ ಹೋಬಳಿಯ ಅಗರದ ಎಸ್‌.ಜೆ.ಎಸ್ ಫ್ಯಾಕ್ಟರಿ ಬಳಿಯ ಲೇಔಟ್‌ ಬಳಿ ಮದ್ಯ ಸೇವಿಸಲು ಹೋಗಿದ್ದರು. ಪಕ್ಕದಲ್ಲೇ ಮದ್ಯ ಸೇವಿಸುತ್ತಿದ್ದ ಆರೋಪಿಗಳು ಜೋರಾಗಿ ಕೂಗಾಡುತ್ತಿದ್ದರು. ಅದಕ್ಕೆ ತಿಲಕ್ ಆಕ್ಷೇಪಿಸಿ, ನಿಧಾನವಾಗಿ ಮಾತನಾಡುವಂತೆ ಹೇಳಿದ್ದರು.

ADVERTISEMENT

ಆಗ ಪ್ರಸನ್ನ, ಸಚಿನ್ ಹಾಗೂ ಇತರರು ತಿಲಕ್ ಜೊತೆ ಜಗಳ ತೆಗೆದರು. ಪ್ರಸನ್ನ ತನ್ನ ಬಳಿ ಇದ್ದ ಚಾಕುವಿನಿಂದ ತಿಲಕ್  ಕುತ್ತಿಗೆಗೆ ಹೊಡೆದು ಕೊಲೆಗೆ ಯತ್ನಿಸಿದ್ದ. ಗಾಯಗೊಂಡ ಅವರನ್ನು ಸ್ನೇಹಿತರು ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ, ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.

ಆಸ್ಪತ್ರೆಯಲ್ಲಿ ತಿಲಕ್ ನೀಡಿದ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಾದ ಪ್ರಸನ್ನ ಮತ್ತು ಸಚಿನ್‌ನನ್ನು ಬಂಧಿಸಲಾಯಿತು. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಅನಿಲ್‌ ಕುಮಾರ್ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಚಿನ್ ಎಂ.
ಗಾಂಜಾ ಮಾರಾಟ-ನಾಲ್ವರ ಬಂಧನ
ರಾಮನಗರದ ಯಾರಬ್‌ನಗರದ ಗೆಜ್ಜಲಗುಡ್ಡೆ ಬಳಿಯ ಉದ್ಯಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿರುವ ರಾಮನಗರ ಟೌನ್ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಯಾರಬ್‌ನಗರದ ಸರ್ದಾರ್ ಸಾದಿಕ್ ಪಾಷಾ ಮೆಹಬೂಬ್‌ನಗರದ ಸಯ್ಯದ್ ಖಲೀಂ ಅಲಿಯಾಸ್ ಕಚಡಾ ಖಲೀಂ ಹಾಗೂ ಜಾವಿದ್ ಬಂಧಿತರು. ಆರೋಪಿಗಳಿಂದ ₹6700 ಮೌಲ್ಯದ 134 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.