ADVERTISEMENT

ರಾಮನಗರ: ರೀಲರ್‌ಗಳ ಪ್ರತಿಭಟನೆ; ರೇಷ್ಮೆಗೂಡು ಹರಾಜು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 16 ಮೇ 2020, 6:17 IST
Last Updated 16 ಮೇ 2020, 6:17 IST
   

ರಾಮನಗರ: ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ರೀಲರ್ ಗಳು ಶನಿವಾರ ರೇಷ್ಮೆಗೂಡು ಖರೀದಿ ಪ್ರಕ್ರಿಯೆಯಿಂದ ಹಿಂದೆ ಉಳಿದಿದ್ದಾರೆ. ಇದರಿಂದಾಗಿ ಇಲ್ಲಿನ ರೇಷ್ಮೆಗೂಡು ಹರಾಜು ಮಾರುಕಟ್ಟೆಯಲ್ಲಿ ವಹಿವಾಟು‌ ಸ್ಥಗಿತಗೊಂಡಿದೆ.

ರೈತರು ರಾತ್ರಿಯಿಂದಲೇ ಗೂಡು ತಂದಿದ್ದು, ಮಾರುಕಟ್ಟೆಯಲ್ಲಿ ಹರಡಿದ್ದಾರೆ. 10.30ಕ್ಕೆ ಇ-ಹರಾಜು ಪ್ರಕ್ರಿಯೆ ನಡೆಯಬೇಕಿದೆ. ಆದರೆ ರೀಲರ್ ಗಳೆಲ್ಲರೂ ಹೊರ ನಡೆದಿದ್ದಾರೆ.

ಹೊರ ರಾಜ್ಯಗಳಿಗೆ ನೂಲು ಸಾಗಿಸಲು ಪಾಸ್ ನೀಡಬೇಕು. ಕೆ ಎಸ್ ಎಂಬಿಯಿಂದ ಪ್ರತಿ ರೀಲರ್ ಗೆ ಐದು ಲಕ್ಷ ರೂಪಾಯಿ ಅಡಮಾನ ಸಾಲ‌ ನೀಡಬೇಕು ಎನ್ನುವುದು ರೀಲರ್ ಗಳ ಬೇಡಿಕೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.