ರಾಮನಗರ: ಕನಕಪುರ ತಾಲ್ಲೂಕಿನ ನಲ್ಲಹಳ್ಳಿ ಗ್ರಾಮದ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಮೇಲ್ಭಾಗದ ರಸ್ತೆಯುಮಳೆಯ ರಭಸಕ್ಕೆ ಕೊಚ್ಚಿ ಹೋಗಿದೆ.
ಸಾತನೂರು-ಸಂತೆ ಕೋಡಿಹಳ್ಳಿ ನಡುವಿನ ಈ ರಸ್ತೆಯು ಸಾತನೂರಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ.
ಕಳೆದ ಮೂರು ದಿನದಿಂದ ನಲ್ಲಹಳ್ಳಿ ಸೇತುವೆಯು ಮುಳುಗಡೆ ಆಗಿದ್ದು, ಇದರೊಟ್ಟಿಗೆ ರಸ್ತೆ ಹಾಳಾಗಿದೆ. ಈ ಭಾಗದಲ್ಲಿ ಸದ್ಯ ವಾಹನಗಳ ಓಡಾಟ ಬಂದ್ ಆಗಿದ್ದು, ಮೂರು ಹೋಬಳಿಗಳ ಜನರಿಗೆ ತೊಂದರೆ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.