ಮಾಗಡಿ: ತಾಲ್ಲೂಕಿನ ಸುಗ್ಗನಹಳ್ಳಿಯಲ್ಲಿ ಶನಿವಾರ ಕೆ.ಆರ್.ಎಸ್. ಫೌಂಡೇಷನ್ ವತಿಯಿಂದ ಶಾರದಾ ರಾಜಣ್ಣ ನೆನಪಿನಲ್ಲಿ 200 ಜನ ಬಡವರಿಗೆ ಫೌಂಡೇಷನ್ ಖಜಾಂಚಿ ತ್ಯಾಗರಾಜು ದಿನಸಿ ಕಿಟ್ ವಿತರಿಸಿದರು.
ಅಮೆರಿಕದಲ್ಲಿ ನೆಲೆಸಿದ್ದರೂ ಜನಿಸಿದ ಹಳ್ಳಿಯ ಸಂಬಂಧ ಕಳೆದುಕೊಳ್ಳದೆ ಗ್ರಾಮೀಣ ಜನರ ಪ್ರಗತಿಗೆ ಶ್ರಮಿಸುತ್ತಿರುವ ಎಂಜಿನಿಯರ್ ರಾಜಣ್ಣ ಅವರು ತನ್ನ ಪತ್ನಿ ಶಾರದಾ ಅವರ ಹೆಸರಿನಲ್ಲಿ ಮಹಿಳೆಯ ಅಭಿವೃದ್ಧಿಗೆ ಹೊಲಿಗೆ ಯಂತ್ರ ನೀಡುವುದರ ಜೊತೆಗೆ ಉಚಿತ ಧನಸಹಾಯ ಮಾಡುತ್ತಿದ್ದಾರೆ ಎಂದು ತ್ಯಾಗರಾಜು ತಿಳಿಸಿದರು.
ಫೌಂಡೇಷನ್ ಕಾರ್ಯದರ್ಶಿ ರವಿ, ಸುಹಾಸ್ ತ್ಯಾಗರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.