ADVERTISEMENT

ಲೋಕನಾಯ್ಕನದೊಡ್ಡಿಯ ಮೂರು ದೇಗುಲಗಳಲ್ಲಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 2:15 IST
Last Updated 11 ಜುಲೈ 2022, 2:15 IST

ಕನಕಪುರ: ದೇಗುಲಗಳಬೀಗ ಒಡೆದು ದೇವರ ಒಡವೆಗಳು ಮತ್ತು ಹುಂಡಿಯಲ್ಲಿನ ಹಣ ದೋಚಿಸಿರುವ ಘಟನೆ ತಾಲ್ಲೂಕಿನ ಮರಳವಾಡಿ ಹೋಬಳಿ ಲೋಕನಾಯ್ಕನದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಂತಸೇವಲಾಲ್‌, ದಂಡಿನ ಮಾರಮ್ಮ ಹಾಗೂ ಬಸವೇಶ್ವರ ದೇವಾಲಯಗಳಲ್ಲಿ ಕಳ್ಳತನ ನಡೆದಿದೆ. ದೇವರ ಮೇಲೆ ಹಾಕಿದ್ದ ಬಂಗಾರ ಮತ್ತು ಬೆಳ್ಳಿಯ ಒಡವೆ ಮತ್ತು ಹುಂಡಿಯಲ್ಲಿದ್ದ ಸುಮಾರು ₹80 ಸಾವಿರ ಹಣ ದೋಚಿದ್ದಾರೆ. ಗ್ರಾಮಸ್ಥರು ಬೆಳಿಗ್ಗೆ ದೇವಾಲಯದ ಕಡೆಗೆ ಹೋದಾಗ ಕಳವಾಗಿರುವುದು ಬೆಳಕಿಗೆ ಬಂದಿದೆ. ಗ್ರಾಮಸ್ಥರು ಹಾರೋಹಳ್ಳಿ ಪೊಲೀಸ್‌ ಠಾಣೆಗ ಈ ಸಂಬಂಧ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT