ADVERTISEMENT

ಚನ್ನಪಟ್ಟಣ: ಮನೆ ಬಾಗಿಲು ಮುರಿದು ಕಳವು

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 3:52 IST
Last Updated 25 ಜುಲೈ 2021, 3:52 IST

ಚನ್ನಪಟ್ಟಣ: ತಾಲ್ಲೂಕಿನ ಸೋಗಾಲಪಾಳ್ಯ ಗ್ರಾಮದಲ್ಲಿ ಹಾಡಹಗಲೇ ಮನೆಯ ಬಾಗಿಲ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಶನಿವಾರನಡೆದಿದೆ.

ಗ್ರಾಮದ ಚಿಕ್ಕಣ್ಣ ಅವರ ಮಗ ನವೀನ್ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳನುಗ್ಗಿರುವ ಕಳ್ಳರು ನಗದು, ಚಿನ್ನಾಭರಣ ಕಳವು ಮಾಡಿದ್ದಾರೆ.

ಮನೆ ಮಾಲೀಕ ನವೀನ್ ತಮ್ಮ ತಾಯಿಯ ಜೊತೆ ಜಮೀನಿನ ಬಳಿ ಹೋಗಿದ್ದರು. ಅವರ ಪತ್ನಿ ತವರಿಗೆ ಹೋಗಿದ್ದರು ಎಂದು ತಿಳಿದು
ಬಂದಿದೆ.

ADVERTISEMENT

ಕಳ್ಳರು ಮನೆಯ ಬೀರುವಿನಲ್ಲಿದ್ದ 30 ಗ್ರಾಂ ಮಾಂಗಲ್ಯ ಸರ, 8 ಗ್ರಾಂ ಓಲೆ, 3 ಗ್ರಾಂ ಚಿನ್ನದ ಕಾಸು, 3 ಗ್ರಾಂ ಚಿನ್ನದ ಮಾಟಿ, 30 ಗ್ರಾಂ ಬ್ರಾಸ್ಲೆಟ್, 5 ಗ್ರಾಂ ಚಿನ್ನದ ಉಂಗುರ, ತಂದೆಗೆ ಸೇರಿದ 15 ಗ್ರಾಂ ಚಿನ್ನದ ಚೈನು, 7 ಗ್ರಾಂ ಉಂಗುರ, ಬಿರುವಿನಲ್ಲಿದ್ದ 15 ಸಾವಿರ ನಗದು ದೋಚಿದ್ದಾರೆ.

ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.