ADVERTISEMENT

ಕುದೂರು: ದ್ವಿಚಕ್ರ ವಾಹನಗಳ ಕಳವು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2023, 14:44 IST
Last Updated 24 ಸೆಪ್ಟೆಂಬರ್ 2023, 14:44 IST

ಕುದೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳು ಕಳ್ಳತನವಾಗಿರುವ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಲೂರಿನ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಕೆಲಸಕ್ಕೆ ತೆರಳಿ ವಾಪಸ್ ಬರುವ ವೇಳೆಗೆ ₹ 25 ಸಾವಿರ ಬೆಲೆಬಾಳುವ ವಾಹನ ಕಳ್ಳತನವಾಗಿದೆ ಎಂದು ಕುದೂರು ಹೋಬಳಿಯ ಲಕ್ಕಯ್ಯನಪಾಳ್ಯ ಗ್ರಾಮದ ಮಲ್ಲೇಶ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಿಪ್ಪಸಂದ್ರ ಹೋಬಳಿಯ ನೇರಳೇಕೆರೆ ಕಾಲೋನಿಯ ಮನೆ ಮುಂದೆ ರಾತ್ರಿ ವೇಳೆ ನಿಲ್ಲಿಸಲಾಗಿದ್ದ ₹ 1.20ಲಕ್ಷ ಬೆಲೆಬಾಳುವ ಬುಲೆಟ್ ಬೈಕ್ ಕಳ್ಳತನವಾಗಿದೆ ಎಂದು ತಿಪ್ಪಸಂದ್ರ ಗ್ರಾಮದ ಹನುಮಂತರಾಜು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.