ADVERTISEMENT

ರಾಮನಗರ: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಲಾಕೌಟ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 13:09 IST
Last Updated 10 ನವೆಂಬರ್ 2020, 13:09 IST
ಪ್ರತಿಭಟನಾನಿರತ ಕಾರ್ಮಿಕರು
ಪ್ರತಿಭಟನಾನಿರತ ಕಾರ್ಮಿಕರು   

ರಾಮನಗರ: ಇಲ್ಲಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆಯು ಅನಿರ್ದಿಷ್ಟ ಅವಧಿಗೆ ಲಾಕೌಟ್ ಘೋಷಣೆ ಮಾಡಿದೆ.

ಅಶಿಸ್ತು ತೋರಿದ ಆರೋಪದ ಮೇಲೆ ಕಾರ್ಮಿಕ ಯೂನಿಯನ್ ಖಜಾಂಚಿ ಉಮೇಶ್ ಆಲೂರು ಎಂಬುವರನ್ನು ಕಂಪನಿಯು ಸೇವೆಯಿಂದ ಅಮಾನತು ಗೊಳಿಸಿತ್ತು. ಇದನ್ನು ಖಂಡಿಸಿ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದ್ದರು.

‘ಏಕಾಏಕಿ ಪ್ರತಿಭಟನೆ ನಡೆಸಿದ್ದು ಹಾಗೂ ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿದ್ದಕ್ಕಾಗಿ ಲಾಕೌಟ್ ಘೋಷಿಸಲಾಗಿದೆ. ಕಾರ್ಮಿಕ ಯೂನಿಯನ್ ಜೊತೆ ಮಾತುಕತೆ ನಡೆದಿದೆ’ ಎಂದು ಟಿಕೆಎಂ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.