ADVERTISEMENT

ರಾಮನಗರದಲ್ಲಿ ತರಬೇತಿ ನಿರತ ಕಾನ್‌ಸ್ಟೆಬಲ್ ಸಾವು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 9:23 IST
Last Updated 12 ಆಗಸ್ಟ್ 2021, 9:23 IST
ಕಾನ್‌ಸ್ಟೆಬಲ್ ಯಲ್ಲಪ್ಪ
ಕಾನ್‌ಸ್ಟೆಬಲ್ ಯಲ್ಲಪ್ಪ   

ರಾಮನಗರ: ಚನ್ನಪಟ್ಟಣದ ಪೊಲೀಸ್‌ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದ ಕಾನ್‌ಸ್ಟೆಬಲ್ ಯಲ್ಲಪ್ಪ ಗುರುವಾರ ಕುಸಿದು ಬಿದ್ದು ಮೃತಪಟ್ಟರು.

ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನವರಾದ ಯಲ್ಲಪ್ಪ ಕಳೆದ ಎರಡೂವರೆ ತಿಂಗಳಿಂದ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದರು. ಗುರುವಾರ ತರಬೇತಿ ಸಂದರ್ಭ ಆಯಾಸದಿಂದ ಕುಸಿದು ಬಿದ್ದಿದ್ದರು. ಹೀಗಿದ್ದೂ ಶಾಲೆಯ ಅಧಿಕಾರಿಗಳು ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿ ಉಳಿದ ಟ್ರೈನಿ ಕಾನ್‌ಸ್ಟೆಬಲ್‌ಗಳು ಶಾಲೆ ಮುಂಭಾಗ ‍ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT