ADVERTISEMENT

ಕನಕಪುರ: ಆನೆ ತುಳಿದು ಕೂಲಿ ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 22:41 IST
Last Updated 6 ಸೆಪ್ಟೆಂಬರ್ 2023, 22:41 IST
ಆನೆದಾಳಿಯಿಂದ ಮೃತಪಟ್ಟ ಚಿಕ್ಕರಾಮಯ್ಯ
ಆನೆದಾಳಿಯಿಂದ ಮೃತಪಟ್ಟ ಚಿಕ್ಕರಾಮಯ್ಯ   

ಕನಕಪುರ: ಕೂಲಿ ಕಾರ್ಮಿಕರೊಬ್ಬರನ್ನು ಕಾಡಾನೆ ತುಳಿದು ಸಾಯಿಸಿರುವ ಘಟನೆ ತಾಲ್ಲೂಕಿನ ಕೊಳಗೊಂಡನಹಳ್ಳಿ ಸಮೀಪದ ಕಾಡಿನಲ್ಲಿ ಬುಧವಾರ ನಡೆದಿದೆ.

ಗಟ್ಟಿಗುಂದ ಗ್ರಾಮದ ಕೂಲಿ ಕಾರ್ಮಿಕ ಚಿಕ್ಕರಾಮಯ್ಯ (60) ಮೃತರು. ಗ್ರಾಮದ ಸಮೀಪ ಕಾಡಿನಲ್ಲಿರುವ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿ ವಾಪಸ್‌ ಬರುವಾಗ ಒಂಟಿ ಆನೆ ದಾಳಿ ನಡೆಸಿದೆ.

ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ. ಕೋಡಿಹಳ್ಳಿ ಠಾಣೆಯಲ್ಲಿ ಪ‍್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.