ಶಿವಮೊಗ್ಗ: ಮಂತ್ರಿಗಿರಿಗಾಗಿ ಬೆನ್ನತ್ತಿ ಹೋಗುವುದಿಲ್ಲ.ಶಾಸಕನಾಗೇಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸಮೀಪದಉಂಬ್ಳೇಬೈಲ್ನಲ್ಲಿ ₨ 2.5 ಕೋಟಿವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅಭಿವೃದ್ಧಿ ಒಂದು ಸಂಕಲ್ಪ. ಹೋರಾಟದಿಂದಲೇಅಭಿವೃದ್ಧಿ ಸಾದಿಸುವ ಛಲವಿದೆ.ಪ್ರತಿಷ್ಠಿತಕೌಟುಂಬಿಕ ಹಿನ್ನಲೆ ಇಲ್ಲದ ನನ್ನಂಥ ಸಾಮಾನ್ಯನನ್ನುಜನರು ನಾಲ್ಕು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಿಲ್ಲ ಎಂದರು.
ತೀರ್ಥಹಳ್ಳಿ ಕ್ಷೇತ್ರ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ನೂರಾರು ಕಿ.ಮೀ ವಿಸ್ತಾರವಿದೆ.ಒಂದು ಭಾಗದ ಅಭಿವೃದ್ಧಿ ಯೋಚಿಸಿದರೆ, ಮತ್ತೊಂದು ಭಾಗ ಕುಂಠಿತವಾಗುತ್ತದೆ. ಕ್ಷೇತ್ರದ ಪೂರ್ಣ ಕಲ್ಪನೆ ಇಟ್ಟುಕೊಂಡು ಅಭಿವೃದ್ಧಿ ಸಾಧಿಸುವುದು ಒಂದು ದೊಡ್ಡಸವಾಲು.ರಾಜ್ಯದಲ್ಲಿ ಸ್ಥಿರ, ಸದೃಢಸರ್ಕಾರಬಂದಿದೆ. ಮುಖ್ಯಮಂತ್ರಿ ಜಿಲ್ಲೆಯವರೆ ಇದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಚಿಂತಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿಸದಸ್ಯೆ ಹೇಮಾವತಿ, ಶಿವನಂಜಪ್ಪ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.