ADVERTISEMENT

ಭದ್ರಾವತಿಯಲ್ಲಿ ಜೋಡಿ ಹತ್ಯೆ ಪ್ರಕರಣ; ಗಂಭೀರ ತನಿಖೆ ನಡೆಸಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 4:37 IST
Last Updated 16 ಡಿಸೆಂಬರ್ 2025, 4:37 IST
ಭದ್ರಾವತಿಯಲ್ಲಿ ಹತ್ಯೆಗೀಡಾದ ಮಂಜುನಾಥ್ ಮತ್ತು ಕಿರಣ್ ನಿವಾಸಗಳಿಗೆ ಪ್ರೊ. ಬಿ. ಕೃಷ್ಣಪ್ಪ ಭೇಟಿ ನೀಡಿದರು
ಭದ್ರಾವತಿಯಲ್ಲಿ ಹತ್ಯೆಗೀಡಾದ ಮಂಜುನಾಥ್ ಮತ್ತು ಕಿರಣ್ ನಿವಾಸಗಳಿಗೆ ಪ್ರೊ. ಬಿ. ಕೃಷ್ಣಪ್ಪ ಭೇಟಿ ನೀಡಿದರು   

ಭದ್ರಾವತಿ: 3 ದಿನಗಳ ಹಿಂದೆ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗಳ ಬಿಡಿಸಲು ಹೋದ ಅಗ್ನಿವೀರ್ ಸೈನ್ಯಕ್ಕೆ ಆಯ್ಕೆಯಾಗಿದ್ದ ಕಿರಣ್ ಮತ್ತು ಖಾಯಂ ಪೌರಕಾರ್ಮಿಕ ಮಂಜುನಾಥ್ ಅವರನ್ನು ಹತ್ಯೆ ಮಾಡಿರುವವರಿಗೆ ಕಠಿಣ ಶಿಕ್ಷೆ ವಿಧಿಸುವ ಜೊತೆಗೆ ಮಂಜುನಾಥ್ ಕುಟುಂಬಕ್ಕೆ ಸರ್ಕಾರಿ ನೌಕರಿ ಹಾಗೂ ಕಿರಣ್ ಕುಟುಂಬಕ್ಕೆ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಮಂಜುನಾಥ್ ಮತ್ತು ಕಿರಣ್ ನಿವಾಸಗಳಿಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗೂ ಪೊಲೀಸ್ ಅಧೀಕ್ಷಕ ಪ್ರಕಾಶ್ ರಾಥೋಡ್ ಅವರಿಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದರು.

ಜೈ ಭೀಮ್ ನಗರ ಯುವಕರ ಮೋಜು ಮಸ್ತಿಗೆ, ಅಕ್ರಮ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿದ್ದು, ಈ ರೀತಿಯ ಕೃತ್ಯಗಳು ಹೆಚ್ಚಾಗುತ್ತಿವೆ. ಇದನ್ನು ತಡೆಗಟ್ಟಲು ಜೈ ಭೀಮ್ ನಗರದ ಉದ್ಯಾನವನದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಆಗ್ರಹಿಸಿದರು.

ADVERTISEMENT

ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯರಾದ ಶಿವಬಸಪ್ಪ, ಶಿವಕುಮಾರ್, ಜಿಲ್ಲಾ ಘಕಟದ ಸಂಚಾಲಕ ಎಂ. ಏಳುಕೋಟಿ, ತಾಲ್ಲೂಕು ಘಟಕದ ಸಂಚಾಲಕ ಕಾಚಗೊಂಡನಹಳ್ಳಿ ನಾಗರಾಜ್, ಮುಖಂಡ ಶ್ರೀನಿವಾಸ್ ಹಾಗೂ ಜೈ ಭೀಮ್ ನಗರದ ದಲಿತ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.