ಶಿವಮೊಗ್ಗ: ಕೋವಿಡ್ ಸಂಕಷ್ಟ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ₹20 ಲಕ್ಷ ಕೋಟಿ ಆತ್ಮನಿರ್ಭರ್ ಪ್ಯಾಕೇಜ್ದೇಶದಶೇ 70ರಷ್ಟು ಫಲಾನುಭವಿಗಳಿಗೆತಲುಪಿದೆಎಂದುಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಸಣ್ಣ, ಅತಿಸಣ್ಣ ಮತ್ತುಮಧ್ಯಮ ವರ್ಗದ ಕೈಗಾರಿಕೆಗಳು (ಎಂಎಸ್ಎಂಇ) ಕೇಂದ್ರ ಸರ್ಕಾರದ ನೀಡಿದ ಪ್ಯಾಕೇಜ್ ಲಾಭ ಪಡೆದಿವೆ. ಇದರಿಂದ ಉದ್ಯಮಿಗಳಿಗೆ ಕೋವಿಡ್ ಸಂಕಷ್ಟದಿಂದ ಚೇತರಿಸಿಕೊಳ್ಳಲು ಸಹಕಾರಿಯಾಯಿತು.ಜಿಲ್ಲೆಯಲ್ಲೂ32 ಬ್ಯಾಂಕ್ಗಳಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ 5,100 ಖಾತೆದಾರರಿಗೆ ₹107 ಕೋಟಿ ಆರ್ಥಿಕ ನೆರವು ಒದಗಿಸಲಾಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
4.58.895 ಜನಧನ್ ಖಾತೆದಾರರು ಕೇಂದ್ರ ಸರ್ಕಾರದ ನೆರವು ಪಡೆದುಕೊಂಡಿದ್ದಾರೆ.ಗರೀಬ್ ಕಲ್ಯಾಣ ಯೋಜನೆ, ಉದ್ಯೋಗ ಖಾತ್ರಿ, ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ, ಬಂಡವಾಳ ನೆರವುಗಳ ಮೂಲಕ ಕೇಂದ್ರ ಸರ್ಕಾರ ಕೊಟ್ಟ ಭರವಸೆ ಈಡೇರಿಸಿದೆಎಂದು ಶ್ಲಾಘಿಸಿದರು.
ಮೆಗ್ಗಾನ್ ಕೋವಿಡ್ ಆರೈಕೆ ಕೇಂದ್ರದಲ್ಲಿಕೊರೊನಾಸೋಂಕಿತರ ಚಿಕಿತ್ಸೆಯ ಅವ್ಯವಸ್ಥೆ ಸರಿಪಡಿಸಲಾಗುವುದು. ಸಾರ್ವಜನಿಕರು ಸೋಂಕಿತರನ್ನು ವಿರೋಧಿಸದೆ ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕು.ಸೋಂಕುನಿಯಂತ್ರಣಕ್ಕೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮ ಕೈಗೊಂಡಿವೆಎಂದರು.
ಪತ್ರಿಕಾಗೋಷ್ಠಿಯಲ್ಲಿ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಬಿಜೆಪಿ ಮುಖಂಡರಾದ ಎಸ್.ದತ್ತಾತ್ರಿ, ಗಿರೀಶ್ ಪಟೇಲ್, ಎನ್.ಜೆ. ರಾಜಶೇಖರ್, ಜ್ಯೋತಿ ಪ್ರಕಾಶ್, ಧರ್ಮ ಪ್ರಸಾದ್, ಶಿವರಾಜ್, ಶ್ರೀನಾಥ್, ಮಾಲತೇಶ್, ಎಸ್.ಜ್ಞಾನೇಶ್ವರ್, ಕೆ.ವಿ.ಅಣ್ಣಪ್ಪಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.