ADVERTISEMENT

ಸಕ್ರೆಬೈಲು ಆನೆ ಬಿಡಾರದದಲ್ಲಿ ಕಾಡಾನೆ ದಾಳಿಗೆ ‘ರಂಗ’ ಸಾವು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 9:01 IST
Last Updated 24 ಅಕ್ಟೋಬರ್ 2020, 9:01 IST
ಮೃತ ಆನೆ ರಂಗ
ಮೃತ ಆನೆ ರಂಗ   

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಆನೆ ರಂಗ (35) ಶನಿವಾರ ಬೆಳಗಿನ ಜಾವ ಕಾಡಾನೆ ದಾಳಿಗೆ ಮೃತಪಟ್ಟಿದ್ದಾನೆ.

ನಸುಕಿನಲ್ಲಿ ಕಾಡಾನೆ ಏಕಾಏಕಿ ದಾಳಿ ನಡೆಸಿದಾಗ ಸರಪಳಿಯಲ್ಲಿ ಬಂಧಿಯಾಗಿದ್ದ ರಂಗ ಅಸಹಾಯಕ ನಾಗಿದ್ದಾನೆ. ಕಾಡಾನೆಯ ದಂತ ತಿವಿತಕ್ಕೆ ರಕ್ತಸ್ರಾವದಿಂದ ಜೀವ ಬಿಟ್ಟಿದ್ದಾನೆ.

ಸಕ್ರೆಬೈಲು ಕ್ಯಾಂಪ್ ನಲ್ಲಿ ಹುಟ್ಟಿದ ರಂಗ. ಗೀತಾ ಆನೆಯ ಪುತ್ರ.

ADVERTISEMENT

ರಾತ್ರಿ ಸಮಯದಲ್ಲಿ ಕಟ್ಟಿ ಹಾಕದಿದ್ದರೆ ರಂಗ ಬದುಕಿ ಉಳಿಯುತ್ತಿದ್ದ. ಮಾವುತರು, ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.