ಶಿವಮೊಗ್ಗ: ಜನರು ಕೋವಿಡ್ ಸಂಕಷ್ಟದಲ್ಲಿ ಇದ್ದಾಗ ಸುಗ್ರಿವಾಜ್ಞೆ ಮೂಲಕ ರೈತ ವಿರೋಧಿ ಕೃಷಿ ಮಸೂದೆಗಳನ್ನು ಜಾರಿಗೆ ತಂದಿದೆ. ದೇಶದ ರೈತರಿಗೆ ಅನ್ಯಾಯ ಮಾಡುವ ಸರ್ಕಾರಗಳು ಭಸ್ಮವಾಗುತ್ತವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಡಾ.ದರ್ಶನ್ ಪಾಲ್ ಎಚ್ಚರಿಸಿದರು.
ನಗರದ ಸೈನ್ಸ್ ಮೈದಾನದಲ್ಲಿ ಶನಿವಾರ ಐಕ್ಯ ಒಕ್ಕೂಟ ಸಮಿತಿ, ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ರೈತರ ಮಹಾ ಪಂಚಾಯತ್ನಲ್ಲಿ ಅವರು ಮಾತನಾಡಿದರು.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ರೈತರು ನಿರಂತರ ಹೋರಾಟ ನಡೆಸುತ್ರಿದ್ದಾರೆ. ರೈತರ ಒಗ್ಗಟ್ಟಿನ ಹೋರಾಟ ಇದೇ ರೀತಿ ಮುಂದುವರಿದರೆ ಎನ್ ಡಿಎ ಸರ್ಕಾರ ರಾಜಕೀಯ ಪತನ ಕಾಣಲಿದೆ ಎಂದರು.
ಗುರುನಾನಕ್ ಅವರಂತೆ ಬಸವಣ್ಣ ಟಿಪ್ಪು ಈ ನೆಲದ ದಾರ್ಶನಿಕರು. ಮಲೆನಾಡಿನ ಜನರು ಗಣಿಗಾರಿಕೆ ವಿರುದ್ಧ ಹೋರಾಡಿ ಹಿಮ್ಮೆಟ್ಟಿಸಿದ್ದರು. ರೈತ ಪಮಚಾಯತ್ ಮೂಲಕ ದಕ್ಣಿಣದ ಜನರಿಗೆ ಮೊದಲ ಸಂದೇಶ ನೀಡಿದ್ದಾರೆ. ದೆಹಲಿ ಹೋರಾಟದ ಜತೆ ಇದ್ದೇವೆ ಎನ್ನುವ ಭರವಸೆ ವ್ಯವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಮೂರು ಕೃಷಿ ಕಾಯ್ದೆಗಳ ವಿರುದ್ಶ ಎಲ್ಲರು ಸೇರಿ ಹೋರಾಟ ರೂಪಿಸಲು ಎರಡು ತಿಂಗಳಾಯಿತು. ನಂತರ ಪಂಚಾಬ್, ಹರಿಯಾಣದಲ್ಲಿ ಭಾರಿ ಪ್ರತಿರೋಧ ಅರಂಬಿಸಿದೆವು, 115 ದಿನ ಹೋರಾಟ ಗಡಿಯಲ್ಲಿ ನೆಲೆ ನಿಂತಿದ್ದೇವೆ. 11 ಸಂಧಾನ ಸಭೆ ನಡೆದರೂ ಸರ್ಕಾರ ಕಾಯ್ದೆ ಹಿಂಪಡೆದಿಲ್ಲ. ಬದಲಿಗೆ ಹೋರಾಟ ಮುರಿಯಲು ಪ್ರಯತ್ನ ನಡೆಸಿದೆ. ಆದರೆ, ಒಗ್ಗಟ್ಟು ಮುರಿಯಲು ಸಾಧ್ಯವಾಗಿಲ್ಲ. ಹೋರಾಟದ ಫಲವಾಗಿ ಹಿಂದೂ ಮುಸ್ಲಿಮರು ಕಟ್ಟ ವಿರೋಧಿಗಳು ಒಗ್ಗೂಡಿದ್ದಾರೆ. ಜನರ ಶಕ್ತಿ ಬಲಗೊಂಡಿದೆ ಎಂದರು.
ಪಂಚಾಬ್ ರೈತರು ಭಿನ್ನಾಭಿಪ್ರಾಯ ಮರೆತ ಕಾರಣ ದೆಹಲಿ ಗಡಿ ತಲುಪಿದೆವು. ನೀವೂ ಒಗ್ಗಟ್ಟು ಪ್ರದರ್ಶಿಸಿದರೆ ಇನ್ನಷ್ಟು ಶಕ್ತಿ. ಗುರಿ ಮುಟ್ಟುವವರೆಗೂ ಹೋರಾಟ ನಿಲ್ಲದು. ಬಾಂಬ್ ಗಳ ಸುರಿಮಳೆಗರೆದರೂ ಅಲ್ಲಿಂದ ಕದಲುವುದಿಲ್ಲ ಎಂದು ಘೋಷಿಸಿದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.