ಸಾಗರ: ತಾಲ್ಲೂಕಿನ ಹೆಗ್ಗೋಡಿನ ನೀನಾಸಂ ಸಂಸ್ಥೆಯ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಅವರ ಪತ್ನಿ ಶೈಲಜಾ (85) ಭಾನುವಾರ ಮುಂಡಿಗೆಸರ ಗ್ರಾಮದ ತಮ್ಮ ನಿವಾಸದಲ್ಲಿ ನಿಧನರಾದರು.
ರಂಗಕರ್ಮಿ ಕೆ.ವಿ ಅಕ್ಷರ ಅವರ ಪುತ್ರ. ಕೆ.ವಿ.ಸುಬ್ಬಣ್ಣ ಅವರು ನೀನಾಸಂ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾಗ ಮನೆ ತೋಟದ ಜವಾಬ್ದಾರಿಗಳನ್ನು ಶೈಲಜಾ ಅವರು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದರು. ಈ ಕಾರಣದಿಂದಲೇ ಸುಬ್ಬಣ್ಣ ಅವರು ನೀನಾಸಂನಲ್ಲಿ ಹೆಚ್ಚು ಕಾಲ ತೊಡಗಿಸಿಕೊಳ್ಳುವಂತಾಗಿತ್ತು.
ನೀನಾಸಂ ಅಂಗಳಕ್ಕೆ ಕಾಲಿಟ್ಟಾಕ್ಷಣ ನಗುಮೊಗದಿಂದ, ಪ್ರೀತಿಯಿಂದ ಬಂದವರೆಲ್ಲರಿಗೂ ಆಪ್ತವಾಗಿ ಮಾತಾಡಿಸುತ್ತಿದ್ದ ಹಿರಿಯ ಜೀವ.
ಎಲ್ಲರ ಬಾಯಿಯಲ್ಲೂ ನೆಚ್ಚಿನ ‘ಅಮ್ಮ’ಎಂದೇ ಹೆಸರಾಗಿದ್ದರು.
ಸಂಸ್ಥೆಯ ಬೆಳವಣಿಗೆಯಲ್ಲಿಶೈಲಜಾ ಅವರ ಪಾತ್ರ, ಕೊಡುಗೆ ಹಿರಿದು. ಮೃತರ ಅಂತ್ಯಕ್ರಿಯೆ ಹೆಗ್ಗೋಡಿನಲ್ಲಿ ಭಾನುವಾರ ನೆರವೇರಿತು.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.