ಶಿವಮೊಗ್ಗ: ಕೆಇಬಿ ವೃತ್ತದ ಬಳಿ ಖಾಸಗಿ, ಸರ್ಕಾರಿ ನಗರ ಸಾರಿಗೆ ಬಸ್ಗಳ ನಿಲುಗಡೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಶಿವಮೊಗ್ಗ ರೈಲುನಿಲ್ದಾಣ ಆಟೊರಿಕ್ಷಾ ಮಾಲೀಕರ ಮತ್ತು ಚಾಲಕರ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ಸುಮಾರು ವರ್ಷಗಳಿಂದ ಅಲ್ಲಿ ಆಟೊರಿಕ್ಷಾ ಸೇವೆ ಸಲ್ಲಿಸುತ್ತಿದ್ದೇವೆ. ಈಚೆಗೆ ಅದೇ ಸ್ಥಳದಲ್ಲಿ ಬಸ್ಗಳು ಬಂದು ನಿಲ್ಲುತ್ತವೆ. ಇದರಿಂದ ಆಟೊರಕ್ಷಾ ಬಾಡಿಗೆ ದೊರೆಯುತ್ತಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ದೂರಿದರು.
ದುಡಿಮೆ ಕಡಿಮೆಯಾದ ಪರಿಣಾಮ ಸಂಸಾರ, ಮನೆ, ಮಕ್ಕಳ ಶಿಕ್ಷಣ, ವೃದ್ಧ ತಂದೆ ತಾಯಿಗಳ ಪಾಲನೆ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.
ಸಂಘದ ಅಧ್ಯಕ್ಷ ಅಲ್ಲಾಭಕ್ಷಿ, ಪ್ರಧಾನ ಕಾರ್ಯದರ್ಶಿ ಎ.ಎನ್.ಸಂತೋಷ್, ಇರ್ಫಾನ್, ಸತೀಸ್, ವಿಜಯ್, ಮೋಹನ್, ಮುಸ್ತಾಫ, ರಿಯಾಜ್, ನವೀನ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.