ADVERTISEMENT

ಪಡಿತರ ವಿತರಣೆಗೆ ಅವಕಾಶ ಕಲ್ಪಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 8:28 IST
Last Updated 31 ಡಿಸೆಂಬರ್ 2025, 8:28 IST
ಹೊಸಕೊಪ್ಪ ಸಹಕಾರ ಸಂಘದ ಸದಸ್ಯರು ಮಂಗಳವಾರ ಶಾಸಕರಿಗೆ ಮನವಿ ಸಲ್ಲಿಸಿದರು
ಹೊಸಕೊಪ್ಪ ಸಹಕಾರ ಸಂಘದ ಸದಸ್ಯರು ಮಂಗಳವಾರ ಶಾಸಕರಿಗೆ ಮನವಿ ಸಲ್ಲಿಸಿದರು   

ತುಮರಿ: ನೂತನವಾಗಿ ಆರಂಭವಾಗಿರುವ ಕರೂರು ಹೋಬಳಿಯ ಹೊಸಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಪಡಿತರ ವಿತರಣೆಗೆ ಅವಕಾಶ ಕಲ್ಪಿಸುವಂತೆ ಮಂಗಳವಾರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಂಘದ ಸದಸ್ಯರು ಮನವಿ ಸಲ್ಲಿಸಿದರು.

ಸಾಗರ ತಾಲ್ಲೂಕಿನ ಹೊಸಕೊಪ್ಪ ಗ್ರಾಮದಲ್ಲಿ ನೂತನವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಚನೆಯಾಗಿದೆ. ಸಹಕಾರ ಸಂಘವು ತನ್ನ ಕಾರ್ಯ ವ್ಯಾಪ್ತಿಯ 5 ಕಂದಾಯ ಗ್ರಾಮಗಳಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಸೇರಿ ಒಟ್ಟು 700 ಪಡಿತರ ಕಾರ್ಡ್‌ಗಳು ಇವೆ.

ಈಗಾಗಲೇ ಈ ಪಡಿತರ ಕಾರ್ಡುದಾರರು ಬ್ಯಾಕೋಡು, ಪಿಎಸಿಎಸ್ (ಸುಳ್ಳಳ್ಳಿ) ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯುತ್ತಿದ್ದಾರೆ. ಇದು ಭೌಗೋಳಿಕವಾಗಿ ಸಾಕಷ್ಟು ದೂರದಲ್ಲಿ ಇರುವುದರಿಂದ ಜನರಿಗೆ ಸಾಕಷ್ಟು ಅನಾನುಕೂಲ ಆಗುತ್ತಿದೆ. ಹಾಗಾಗಿ ಸಮರ್ಪಕ ಕಟ್ಟಡ ಹೊಂದಿರುವ ಹೊಸಕೊಪ್ಪ ಸಹಕಾರ ಸಂಘದ ಮೂಲಕ ಪಡಿತರ ವಿತರಣೆಗೆ ಅವಕಾಶ ಕಲ್ಪಿಸುವಂತೆ ಕೋರಿದ್ದಾರೆ

ADVERTISEMENT

ಇದೇ ವೇಳೆ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಅವರನ್ನು ಭೇಟಿ ಮಾಡಿದ ಸದಸ್ಯರು, ಸಹಕಾರ ಸಂಘದಿಂದ ಸಾಲ ವಿತರಣೆಗೆ ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಿದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರೋಹಿತ್, ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರ ಹಾಬಿಗೆ, ನಿರ್ದೇಶಕರಾದ ಸುಧೀಂದ್ರ ಹೊಸಕೊಪ್ಪ,ವಿಜಯ ಆಡಗಳಲೆ, ರವಿ ಗುರುಟೆ, ದೇವರಾಜ ಕಪ್ಪದೂರು, ಜಿನದತ್ತ ಸತೀಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.