ADVERTISEMENT

ತೀರ್ಥಹಳ್ಳಿ: ಬಸ್– ಪಿಕಪ್‌ ಮುಖಾಮುಖಿ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 14:16 IST
Last Updated 3 ಆಗಸ್ಟ್ 2024, 14:16 IST
ತೀರ್ಥಹಳ್ಳಿ ತಾಲ್ಲೂಕಿನ ಬೈನೆಸರ ಸಮೀಪ ಬಸ್‌ ಅಪಘಾತವಾಗಿರುವುದು.
ತೀರ್ಥಹಳ್ಳಿ ತಾಲ್ಲೂಕಿನ ಬೈನೆಸರ ಸಮೀಪ ಬಸ್‌ ಅಪಘಾತವಾಗಿರುವುದು.   

ತೀರ್ಥಹಳ್ಳಿ: ಮಹಿಷಿ– ದಬ್ಬಣಗದ್ದೆ ಮಾರ್ಗವಾಗಿ ತೀರ್ಥಹಳ್ಳಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಪಿಕಪ್‌ ವಾಹನಕ್ಕೆ ಬೈನೆಸರ ಸಮೀಪ ಮುಖಾಮುಖಿ ಡಿಕ್ಕಿಯಾಗಿದ್ದು, ಪಿಕಪ್‌ ಚಾಲಕನಿಗೆ ಗಂಭೀರ ಗಾಯಗಳಾಗಿವೆ.

ಮಹಿಷಿ– ದಬ್ಬಣಗದ್ದೆ ಮಾರ್ಗದ ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಜೆಜೆಎಂ ಕಾಮಗಾರಿ ಮಾಡಲಾಗಿದೆ. ಗುಂಡಿ ಮುಚ್ಚುವಾಗ ಜಾಗ್ರತೆ ವಹಿಸಿಲ್ಲ. ಅಲ್ಲದೇ ರಸ್ತೆಯ ಪಕ್ಕದ ದಂಡೆ ಮಳೆಯಿಂದ ಕೊಚ್ಚಿ ಹೋಗಿರುವುದರಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT