ADVERTISEMENT

ಸಕ್ರೆಬೈಲು: ಆನೆಯಿಂದ ಪುಂಡಾಟಿಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 5:38 IST
Last Updated 12 ಸೆಪ್ಟೆಂಬರ್ 2022, 5:38 IST
ಮಾವುತನನ್ನು ಅಟ್ಟಾಡಿಸಿಕೊಂಡು ಹೋಗಿರುವ ದೃಶ್ಯ
ಮಾವುತನನ್ನು ಅಟ್ಟಾಡಿಸಿಕೊಂಡು ಹೋಗಿರುವ ದೃಶ್ಯ   

ಶಿವಮೊಗ್ಗ: ಸಕ್ರೆಬೈಲುನಲ್ಲಿ ಮಣಿಕಂಠ ಎಂಬ ಆನೆ ಶನಿವಾರ ಪುಂಡಾಟಿಕೆ ಮಾಡಿದ್ದು, ಮಾವುತನನ್ನು ಅಟ್ಟಾಡಿಸಿಕೊಂಡು ಹೋಗಿದೆ. ಆನೆಯ ಪುಂಡಾಟಿಕೆ ವಿಡಿಯೊ ಸಾಮಾಜಿಕ ಜಾಲತಾಣಲ್ಲಿ ಹರಿದಾಡುತ್ತಿದೆ.

ಸಕ್ರೆಬೈಲು ಆನೆ ಬಿಡಾರದಿಂದ ಮಣಿಕಂಠನನ್ನು ಕಾವಾಡಿ ಇಮ್ರಾನ್ ಕಾಡಿಗೆ ಕರೆದೊಯ್ಯಲು ಅದರ ಹೆಗಲು ಏರಿದ್ದು, ಮಾವುತ ಕಲೀಲ್ ಮಣಿಕಂಠನನ್ನು ಹಿಂಬಾಲಿಸಿ ದ್ವಿಚಕ್ರವಾಹನದಲ್ಲಿ ಹೊರಟಿದ್ದರು.

ಮಾವುತನ ಮೇಲೆ ಮಣಿಕಂಠ ಏಕಾಏಕಿ ಅಟ್ಟಾಡಿಸಿಕೊಂಡು ಬಂದಿತು. ತಕ್ಷಣ ಕಲೀಲ್‌ ಬೈಕ್ ಬಿಟ್ಟು ತಪ್ಪಿಸಿಕೊಂಡರು.

ADVERTISEMENT

ಬಿಡಾರದೊಳಗಿನವರೆಗೆ ಮಾವುತನನ್ನು ಅಟ್ಟಾಡಿಸಿಕೊಂಡ ಆನೆಯನ್ನು ನಂತರಅಲ್ಲಿನ ಇತರ ಆನೆಗಳ ಸಹಕಾರದಿಂದ ಕಟ್ಟಿಹಾಕಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.