ಶಿವಮೊಗ್ಗ: ಹಿಂದಿನ ವರ್ಷ ತುಂಗಾ ಪ್ರವಾಹದ ಪರಿಣಾಮದ ಪಾಠ ಕಲಿತಿರುವ ನಗರ ಪಾಲಿಕೆ ಆಡಳಿತ ರಾಜಾಕಾಲುವೆಗಳ ಹೂಳು ತೆಗೆದಸಲು ಮುಂದಾಗಿದೆ.
ಪಾಲಿಕೆ ವ್ಯಾಪ್ತಿಯ 24 ವಾರ್ಡುಗಳ ಸುಮಾರು 23ಭಾಗಗಳಲ್ಲಿ ₨72 ಲಕ್ಷ ವೆಚ್ಚದಲ್ಲಿ ರಾಜಕಾಲುವೆ ಹೂಳೆತ್ತುವ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಮೇಯರ್ ಸುವರ್ಣಾ ಶಂಕರ್ ನೇತೃತ್ವದಲ್ಲಿ ಶುಕ್ರವಾರ ಪಾಲಿಕೆ ಅಧಿಕಾರಿಗಳು, ಸದಸ್ಯರ ತಂಡಚಾಲುಕ್ಯ ನಗರ, ಕುಂಬಾರಗುಂಡಿ, ಸೀಗೆಹಟ್ಟಿ, ಇಮಾಮ್ಬಾಡ, ಗಂಧರ್ವ ನಗರ, ಚಾಲುಕ್ಯ ನಗರಗಳಿಗೆ ಭೇಟಿ ನೀ ಹೂಳೆತ್ತುವ ಕಾಮಗಾರಿ ವೀಕ್ಷಿಸಿತು. ಈ ಬಾರಿ ಎಲ್ಲೂ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳವಂತೆ ಮೇಯರ್ ಸೂಚಿಸಿದರು.
ಉಪ ಮೇಯರ್ ಸುರೇಖಾ ಮುರಳೀಧರ್, ಆಡಳಿತ ಪಕ್ಷ ನಾಯಕ ಎಸ್.ಎನ್. ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ಶಂಕರ್ ನಾಯ್ಕ್, ಪ್ರಭು, ರಾಮೇಶ್, ಶಬಾನಾ ಖಾನಂ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.