ಶಿವಮೊಗ್ಗ: ಖಾಸಗಿ ವಾಹನಗಳ ಮೇಲೆ ‘ಕರ್ನಾಟಕ ಸರ್ಕಾರ’ ಎಂದು ಹಾಕಲಾದ ನಾಮಫಲಕ ಹಾಗೂ ಲೋಗೊ ತೆರವುಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘದ ಸದಸ್ಯರು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದರು.
ಸರ್ಕಾರಿ ಅಧಿಕಾರಿಗಳು ಬಾಡಿಗೆಗೆ ಪಡೆದ ಖಾಸಗಿ ವಾಹನಗಳ ಮೇಲೆ ಇಂತಹ ನಾಮಫಲಕ, ಲಾಂಛನ ಅಳವಡಿಸಲಾಗಿದೆ. ಈಗಾಗಲೇ ಇಂತಹ ಫಲಕಗಳ ತೆರವಿಗೆ ರಾಜಸರ್ಕಾರ ಸುತ್ತೋಲೆ ಹೊರಡಿಸಿದೆ. ಹಾಗಾಗಿ, ತಕ್ಷಣ ಕ್ರಮ ಕೈಗೊಳ್ಳಬೇಕು. ದುರ್ಬಳಕೆ ತಡೆಯಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಜಿ.ಹಾಲೇಶ್, ಕಾರ್ಯದರ್ಶಿ ಜಯರಾಮ್ ಮತ್ತಿತರರು ಮನವಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.