ADVERTISEMENT

ಶಿವಮೊಗ್ಗ - ಭದ್ರಾವತಿ ರೈಲು ಮಾರ್ಗ ಪರಿಶೀಲನೆ: ವಾಹನಗಳ ಓಡಾಟಕ್ಕೆ ಬದಲಿ ಮಾರ್ಗ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 5:07 IST
Last Updated 20 ಅಕ್ಟೋಬರ್ 2025, 5:07 IST
<div class="paragraphs"><p>ರೈಲು ಮಾರ್ಗ</p></div>

ರೈಲು ಮಾರ್ಗ

   

ಶಿವಮೊಗ್ಗ: ಶಿವಮೊಗ್ಗ - ಭದ್ರಾವತಿ ನಡುವೆ ಬರುವ ಎಲ್‌ಸಿ.ನಂ: 35,38 ಮತ್ತು 38/ಎ ಗಳನ್ನು ಮುಚ್ಚಲು ಅದಕ್ಕಾಗಿ ಎಲ್‌ಸಿ ಓಪನ್‌ಗೆ ಮತ್ತು ಪರೀಕ್ಷೆಗಾಗಿ ಅ. 19 ರಿಂದ ಅ.25ರವರೆಗೆ ವಿವಿಧ ದಿನಗಳಂದು ತಾತ್ಕಾಲಿಕವಾಗಿ ವಾಹನಗಳು ಮತ್ತು ಸಾರ್ವಜನಿಕರು ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ  ಹೆಚ್ಚುವರಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಎಲ್‌ಸಿ 35- ಲಕ್ಷ್ಮೀಪುರ ರಸ್ತೆ ಅ. 19ರ ಬೆ.8 ರಿಂದ ಅ.20 ರ ಸಂಜೆ 6ರವರೆಗೆ ಬಿ.ಎಚ್.ರಸ್ತೆ ಮುಖಾಂತರ ಕಡದಕಟ್ಟೆ-ಹೆಬ್ಬಂಡಿ ರಸ್ತೆ ಸಂಪರ್ಕ-ಲಕ್ಷ್ಮೀಪುರ ರಸ್ತೆ ಮಾರ್ಗ.

ADVERTISEMENT

ಎಲ್‌ಸಿ 38- ನವುಲೆ ಬಸವಾಪುರ ರಸ್ತೆ .-ಅ.22ರ ಬೆ.8 ರಿಂದ ಅ.23ರ ಸಂಜೆ 6ರವರೆಗೆ ಎಲ್.ಸಿ.ನಂ.35ರ ಮೂಲಕ ಮಜ್ಜಿಗೇನಹಳ್ಳಿ-ನವುಲೆ ಬಸವಾಪುರ ಸಂಪರ್ಕ ರಸ್ತೆ ಮಾರ್ಗ.

ಎಲ್‌ಸಿ 38/ಎ-ಹೊನ್ನವಿಲೆ ರಸ್ತೆ -ಅ.34 ರ ಬೆ. 8 ರಿಂದ ಅ 25ರ ಸಂಜೆ 6ರವರೆಗೆ ಎಲ್.ಸಿ. ನಂ. 38ರ ಮೂಲಕ ನವುಲೆ ಬಸವಾಪುರ ರಸ್ತೆ- ಹೊನ್ನವಿಲೆ ರಸ್ತೆ ಮಾರ್ಗ.

ಸಾರ್ವಜನಿಕರು/ ವಾಹನ ಸವಾರರು ಈ ಬದಲಿ ಮಾರ್ಗಗಳಲ್ಲಿ ಆಯಾ ದಿನಾಂಕದಂದು ಮಾತ್ರ ಸಂಚರಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.