ಸಾಗರ: ಸಮೀಪದ ಹೆಗ್ಗೋಡಿನ ನೀನಾಸಂ ಸಂಸ್ಥೆಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ 9 ನಿರ್ದೇಶಕರು ನೂತನವಾಗಿ ಆಯ್ಕೆಯಾಗಿದ್ದಾರೆ. 9 ಸ್ಥಾನಗಳಿಗೆ 12 ಮಂದಿ ಸ್ಪರ್ಧಿಸಿದ್ದರು.
ನೂತನ ನಿರ್ದೇಶಕರಾಗಿ ಶಿಶಿರ, ಮಾಧವ ಚಿಪ್ಪಳಿ, ವಿನ್ಯಾಸ ಹೆಗಡೆ, ಸಿದ್ದಾರ್ಥ, ಶರತ್ ಬಾಬು, ಲಲಿತಾ ಜಾಧವ್, ಚನ್ನಕೇಶವ, ವೈ.ಎನ್. ಹಿರಿಯಣ್ಣ, ಎ.ಕೆ. ನಾರಾಯಣ ಸ್ವಾಮಿ ಆಯ್ಕೆಯಾಗಿದ್ದಾರೆ.
ಏಳು ದಶಕಗಳ ನೀನಾಸಂ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.