ADVERTISEMENT

‘2020ಕ್ಕೆ ಮಂಗಳಕ್ಕೆ ದೇಶದ ವಿಜ್ಞಾನಿಗಳು’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 7:06 IST
Last Updated 5 ಡಿಸೆಂಬರ್ 2013, 7:06 IST

ಪಾವಗಡ: ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, 2020ರ ವೇಳೆಗೆ ಭಾರತದ ವಿಜ್ಞಾನಿಗಳು ಮಂಗಳ ಗ್ರಹಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ಕರ್ನಾಟಕ ವಿಜ್ಞಾನ ಪರಿಷತ್ ತಾಲ್ಲೂಕು ಘಟಕದ ನಿರ್ದೇಶಕ ಮಂಗಳವಾಡ ಮಂಜುನಾಥ್ ತಿಳಿಸಿದರು.

ಪಟ್ಟಣದ ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ ವತಿಯಿಂದ ಮಂಗಳವಾರ ‘ಧೂಮಕೇತು ಹಾಗೂ ಸೌರವ್ಯೂಹ’ ಕುರಿತು ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ­ದರು.

ಸೌರವ್ಯೂಹದಲ್ಲಿ ಧೂಮಕೇತುವೂ ಸಹ ಒಂದು ಆಕಾಶಕಾಯ, ಇವುಗಳಿಂದ ಭೂ ಮಂಡಲಕ್ಕೆ ಯಾವುದೇ ಅಪಾಯವಿಲ್ಲ. ಐಸಾನ್ ಧೂಮಕೇತು ಡಿಸೆಂಬರ್ 22ರ ತನಕ ಬೆಳಗಿನ ವೇಳೆಯಲ್ಲಿ ಕಾಣಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT