ತುಮಕೂರು: ಮಾಜಿ ಉಪಮೇಯರ್ ವೆಂಕಟೇಶ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸೈಯದ್
ಶಾಜಾ ಎಂಬುವರನ್ನು ತಿಲಕ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಗುರುವಾರ ರಾತ್ರಿ ಮೆಳೆಕೋಟೆಯ ಅರಳಿಮರದ ಬಳಿ ಆಟೊದಲ್ಲಿ ಕುಳಿತು ಕೆಲವರು ಅಶ್ಲೀಲ ಪದಗಳನ್ನು ಬಳಸುತ್ತ ಜೋರಾಗಿ ಮಾತನಾಡುತ್ತಿದ್ದರು. ನಾನು ಆಗ ಇಲ್ಲಿ ಏಕೆ ಕುಳಿತಿದ್ದೀರಿ. ಏಕೆ ಇಷ್ಟೊಂದು ಗಲಾಟೆ ಮಾಡುತ್ತಿದ್ದೀರಿ ಎಂದು ಕೇಳಿದೆ. ಆಗ ಅವರು ನೀವು ಯಾರು ಕೇಳುವುದಕ್ಕೆ ಎಂದರು. ಅಲ್ಲಿದ್ದ ಕೆಲ ಸ್ಥಳೀಯರು ಇವರು ದಿನವೂ ಇದೇ ರೀತಿ
ಮಾಡುತ್ತಾರೆ ಎಂದು ಹೇಳಿದರು. ಆಗಬುದ್ಧಿವಾದ ಹೇಳಿದೆ. ಮನೆಗೆ ತೆರಳಿದರು. ಸ್ವಲ್ಪ ಸಮಯದ
ನಂತರ ಆ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಬಂದು ಮಚ್ಚಿನಿಂದ ನನ್ನ ಮೇಲೆ ಹಲ್ಲೆ ನಡೆಸಿದ’ ಎಂದು ವೆಂಕಟೇಶ್ ದೂರಿನಲ್ಲಿ
ತಿಳಿಸಿದ್ದಾರೆ.
‘ಇವರು ಗಾಂಜಾ ಸೇದುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.ಬುದ್ಧಿವಾದ ಹೇಳಿದ್ದು ತಪ್ಪಾಯಿತೇ. ಅವನು ನನ್ನ ಮೇಲೆ ಹಲ್ಲೆ ನಡೆಸಿದಾಗ ಆತನ ಮನೆಯವರೂ ಇದ್ದರು’ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.