ADVERTISEMENT

ಬೆಂಗಳೂರು– ತುಮಕೂರು ನಿತ್ಯ ರೈಲಿಗೆ ಪತ್ರ ಬರೆದ ಸಂಸದ ಬಸವರಾಜ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 9:35 IST
Last Updated 29 ಜೂನ್ 2019, 9:35 IST
ಬಸವರಾಜು
ಬಸವರಾಜು   

ತುಮಕೂರು: ತುಮಕೂರು ಸಂಸದ ಜಿ.ಎಸ್ ಬಸವರಾಜ್ ಅವರು ಈ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ರೈಲ್ವೆ ಸಚಿವ ಪಿಯೂಷ್ ಗೋಯಾಲ್‌ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ಅವರಿಗೆ ಪತ್ರ ಬರೆದಿದ್ದಾರೆ.

ಬಿದರೆ ರೋಡ್ - ಎಂ.ಎಸ್ ಕೋಟೆ ರಸ್ತೆ ನಡುವೆ ನಿರ್ಮಾಣ ಆಗಬೇಕಿರುವ ಗುಬ್ಬಿ ಮೇಲ್ಸೇತುವೆ ಕಾಮಗಾರಿಗೆ ₹ 20 ಕೋಟಿ, ಸಿದ್ಧಗಂಗಾಮಠದ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ₹ 20 ಕೋಟಿ, ಭೀಮಸಂದ್ರದ 6ನೇ ವಾರ್ಡ್‌ನಲ್ಲಿ ಪಾದಚಾರಿ ಕೆಳ ಸೇತುವೆ 3 ಮೀ ಅಗಲ 2 1/2 ಮೀ ಎತ್ತರ ನಿರ್ಮಾಣ ಮಾಡುವುದು, ಔಷಧೀಯ ಮತ್ತು ಮಸಾಲೆ ಬೆಳೆಯಾದ ಬಜೆ ಬೆಳೆಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ 5 ಬೇಡಿಕೆಗೆ ಅನುದಾನ ಒದಗಿಸಲು ಕೋರಿದ್ದಾರೆ.

ಹೇಮಾವತಿ ನಾಲೆಗೆ ಭೇಟಿ: ಸಂಸದ ಜಿ.ಎಸ್. ಬಸವರಾಜ್, ಶಾಸಕರು, ಹಾಗೂ ಎಂಜಿನಿಯರ್‌ಗಳು ಶನಿವಾರ ( ಜೂನ್ 28) ಹೇಮಾವತಿ ನಾಲೆಯ ವೀಕ್ಷಣೆ ಮಾಡಲಿದ್ದಾರೆ. ಬೆಳಿಗ್ಗೆ 11ಕ್ಕೆ ಬಾಗೂರು ನವಿಲೆಯಿಂದ ಪ್ರಾರಂಭಿಸಿ ಮುಡ್ಲಾಪುರ, ಈಚನೂರು ಕೆರೆ, ಅರಳುಗುಪ್ಪೆ, ಹೆಗ್ಗೆರೆ, ಅಡವನಹಳ್ಳಿ, ಸುಂಕಾಪುರ, ಮಾರಶೆಟ್ಟಿಹಳ್ಳಿ, ಅದಲಗೆರೆ, ಭೈರೇಹಳ್ಳಿ, ಬುಗುಡನಹಳ್ಳಿಗೆ ಭೇಟಿ ನೀಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.