ADVERTISEMENT

ಬೆಸ್ಕಾಂ ಅಧಿಕಾರಿ ರೈತನಿಂದ ಲಂಚ ಪಡೆಯುತ್ತಿರುವ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 14:00 IST
Last Updated 3 ಮಾರ್ಚ್ 2020, 14:00 IST
ರೈತರೊಬ್ಬರು ಅಧಿಕಾರಿಗೆ ಹಣ ನೀಡುತ್ತಿರುವ ಚಿತ್ರ
ರೈತರೊಬ್ಬರು ಅಧಿಕಾರಿಗೆ ಹಣ ನೀಡುತ್ತಿರುವ ಚಿತ್ರ   

ತಿಪಟೂರು: ರೈತರಿಂದ ಬೆಸ್ಕಾಂ ಅಧಿಕಾರಿಯೊಬ್ಬರು ಹಣ ಪಡೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಲ್ಲೂಕಿನ ನೊಣವಿನಕೆರೆಯ ಬೆಸ್ಕಾಂ ಕಚೇರಿಯ ನೊಣವಿನಕೆರೆ ಶಾಖಾಧಿಕಾರಿ ರವೀಂದ್ರ ಕಚೇರಿಯ ಮುಂಭಾಗ ಟೇಬಲ್ ಹಾಕಿಕೊಂಡು ರೈತನಿಂದ ಹಣವನ್ನು ತನ್ನ ಟೆಬಲ್‍ನ ಬಾಕ್ಸ್ ಒಳಗೆ ಹಾಕಿಸಿಕೊಳ್ಳುವ ವಿಡಿಯೋ ವೈರಲ್ ಆಗಿದೆ.

ಅವರು ಯಾವಾಗಲೂ ಕಚೇರಿಯಿಂದ ಹೊರಭಾಗದಲ್ಲಿಯೇ ಟೇಬಲ್ ಹಾಕಿಕೊಂಡು ಕೂರುತ್ತಿದ್ದು, ರೈತರ ಸಮಸ್ಯೆಯನ್ನು ಬಗೆ ಹರಿಸುವ ಬದಲು ರೈತರಿಂದ ಈ ರೀತಿಯಲ್ಲಿ ಹಣ ಪಡೆಯುತ್ತಿರುವುದು ನಿಜಕ್ಕೂ ಅಮಾನವೀಯ ಸಂಗತಿ ಎಂದು ಸಾರ್ವಜನಿಕರು ದೂರಿದ್ದಾರೆ.

ADVERTISEMENT

‘ವಿಡಿಯೊ ಗಮನಿಸಿದ್ದೇವೆ. ಹಣ ನೀಡಿದವರು ಬಂದು ದೂರು ನೀಡಿಲ್ಲ. ಜೊತೆಗೆ ವಿಡಿಯೊದಲ್ಲಿ ನೋಟು ಕಾಣುತ್ತಿಲ್ಲ. ಈ ಪ್ರಕರಣವನ್ನು ಸಾಬೀತು ಮಾಡಲು ಸಾಧ್ಯವಾಗುವುದಿಲ್ಲ. ಸ್ಥಳೀಯ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ’ ಎಂದು ತಿಪಟೂರು ಶಾಖೆ ಎಇಇ ಜಯಣ್ಣ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.