ADVERTISEMENT

ತುರುವೇಕೆರೆ | ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 14:23 IST
Last Updated 27 ಜುಲೈ 2024, 14:23 IST
ತುರುವೇಕೆರೆ ತಾಲ್ಲೂಕಿನ ತೂಬಿನಕಟ್ಟೆ ಗೇಟ್ ಬಳಿ ಬಸ್‌ಗಳ ಡಿಕ್ಕಿ
ತುರುವೇಕೆರೆ ತಾಲ್ಲೂಕಿನ ತೂಬಿನಕಟ್ಟೆ ಗೇಟ್ ಬಳಿ ಬಸ್‌ಗಳ ಡಿಕ್ಕಿ    

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿ ತೂಬಿನಕಟ್ಟೆ ಗೇಟ್ ಬಳಿ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಶುಕ್ರವಾರ ಸಂಜೆ ಮೈಸೂರಿನಿಂದ ತುಮಕೂರಿನ ಕಡೆ ತೆರಳುತ್ತಿದ್ದು ಬಸ್ ತೂಬಿನ ಕಟ್ಟೆ ಗೇಟ್ ಬಳಿ ಅದೇ ರಸ್ತೆಯಲ್ಲಿ ತುಮಕೂರಿನಿಂದ ಮೈಸೂರಿನೆಡೆಗೆ ಚಲಿಸುತ್ತಿದ್ದ ಬಸ್‌ಗೆ ಡಿಕ್ಕಿಯಾಗಿದೆ.

ಎರಡು ಬಸ್‌ಗಳ ಮುಂಭಾಗದ ಗಾಜು ಪುಡಿಪುಡಿಯಾಗಿದೆ. ಮೈಸೂರು ಕಡೆಯಿಂದ ಬರುತ್ತಿದ್ದ ಬಸ್ ಚಾಲಕನಿಗೆ ಗಾಯವಾಗಿದೆ. ತುಮಕೂರು ಕಡೆಯಿಂದ ಬರುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಗುವಿಗೆ ಹೆಚ್ಚಿನ ಪೆಟ್ಟಾಗಿದೆ.

ADVERTISEMENT

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.