ತುಮಕೂರು: ‘ಏ ನೀವು ಆ ಬಾಕ್ಸ್ನಲ್ಲಿ ನಿಲ್ಲಿ. ದೂರ ನಿಲ್ರಿ, ದೂರ’ ನಗರದಲ್ಲಿ ತೆರೆದಿರುವ ದಿನಸಿ ಅಂಗಡಿಗಳು, ಔಷಧ ಅಂಗಡಿಗಳ ಬಳಿ ಕೇಳಿ ಬರುವ ಮಾತಿದು.
ಅಗತ್ಯ ವಸ್ತುಗಳು ದೊರೆಯುತ್ತವೆ ಎನ್ನುವುದು ನಾಗರಿಕರಿಗೆ ಖಚಿತವಾದ ನಂತರ ದಿನಸಿ ಅಂಗಡಿಗಳ ಮುಂದೆ ಹೆಚ್ಚು ದಟ್ಟಣೆಯೇನೂ ಇಲ್ಲ. ಎಲ್ಲ ಮೆಡಿಕಲ್ ಸ್ಟೋರ್ಗಳು ತೆರದಿದ್ದು ಜನರು ಅಲ್ಲಿ ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ಅಂಗಡಿಗಳ ಎದುರು ಜನರು ಅಂತರಕಾಯ್ದುಕೊಳ್ಳುವ ದೃಷ್ಟಿಯಿಂದ ಬಣ್ಣ, ಸುಣ್ಣಗಳಿಂದ ಬಾಕ್ಸ್ ಇಲ್ಲವೆ ವೃತ್ತಗಳನ್ನು ಬರೆಯಲಾಗಿದೆ. ಖರೀದಿಗೆ ಬರುವ ಗ್ರಾಹಕರು ಈ ವೃತ್ತದೊಳಗೆ ನಿಲ್ಲುತ್ತಿದ್ದಾರೆ. ಎಲ್ಲರೂ ಸ್ವಯಂ ಜಾಗೃತರಾಗಿ ಅಂತರಕಾಯ್ದುಕೊಳ್ಳುತ್ತಿದ್ದಾರೆ. ಕೆಲವರು ಎಚ್ಚರ ತಪ್ಪಿದರೆ ಅಂಗಡಿಗಳ ಮಾಲೀಕರೇ ‘ನೀವು ಅಲ್ಲಿ ನಿಲ್ಲಿ. ಆ ಬಾಕ್ಸ್ನೊಳಗೆ ಇರಿ’ ಎಂದು ಸಲಹೆಗಳನ್ನು ನೀಡುತ್ತಿದ್ದಾರೆ.
ಎಳನೀರು ಅಂಗಡಿಗಳು, ಮಟನ್ ಸ್ಟಾಲ್ಗಳ ಎದುರು ಸಹ ಈ ಅಂತರ ಕಾಯ್ದುಕೊಳ್ಳುವಿಕೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.