ADVERTISEMENT

ವಿಶ್ವ ಗುರುವಿಗೆ ನಮನ: ನೀರಿನ ಕ್ಯಾನ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 15:19 IST
Last Updated 31 ಜನವರಿ 2019, 15:19 IST
ಚಂದ್ರಶೇಖರ್‌ ಅವರು ಉಚಿತ ಕುಡಿಯುವ ನೀರಿನ ಕ್ಯಾನ್‌ಗಳನ್ನು ವಿತರಿಸಿದರು
ಚಂದ್ರಶೇಖರ್‌ ಅವರು ಉಚಿತ ಕುಡಿಯುವ ನೀರಿನ ಕ್ಯಾನ್‌ಗಳನ್ನು ವಿತರಿಸಿದರು   

ತುಮಕೂರು: ತಾಲ್ಲೂಕಿನ ಊರ್ಡಿಗೆರೆ ಹೋಬಳಿಯ ನಂದಿಹಳ್ಳಿಯಲ್ಲಿ ಹೊಯ್ಸಳ ಸೇವಾ ಸಂಸ್ಥೆಯಿಂ‌ದ ಆಯೋಜಿಸಿದ್ದ ವಿಶ್ವಗುರುತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗೆ ನಮನ ಹಾಗೂ ಉಚಿತ ಕುಡಿಯುವ ನೀಡಿನ ಕ್ಯಾನ್‌ ವಿತರಣಾ ಸಮಾರಂಭವನ್ನು ಕಾಪ್‌ರಾಡ್‌ ಇಂಡಸ್ಟ್ರಿಸ್‌ ಸಂಸ್ಥೆಯ ಮಾಲೀಕ ಚಂದ್ರಶೇಖರ್‌ ನೆರವೇರಿಸಿದರು.

ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗ್ರಾಮದ ಹಿರಿಯ ನಾಗರೀಕರಿಗೆ ಸನ್ಮಾನಿಸಲಾಯಿತು. ನಂದಿಹಳ್ಳಿ ಗ್ರಾಮದ 300 ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತ ಕುಡಿಯುವ ನೀರಿನ ಕ್ಯಾನ್‌ಗಳನ್ನು ವಿತರಿಸಲಾಯಿತು

ನಂತರ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಹೊಯ್ಸಳ ಸೇವಾ ಸಂಸ್ಥೆಯ ಜನಪರ ಕಾರ್ಯಕ್ರಮಗಳಲ್ಲಿ ನಮ್ಮ ಸಂಸ್ಥೆಯು ಸಹ ತೊಡಗಿಸಿಕೊಳ್ಳುತ್ತದೆ. ಹಾಗೇ ನಂದಿಹಳ್ಳಿಯಲ್ಲಿ ಶಾಲಾ ಕಟ್ಟಡವನ್ನು ನಿರ್ಮಿಸಲು ಸಹಾಯ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಹೊಯ್ಸಳ ಸೇವಾ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ವಿಷ್ಣುವರ್ಧನ್, ಗ್ರಾ.ಪಂ.ಮಾಜಿ ಸದಸ್ಯ ಬಸವರಾಜು, ಮುಖಂಡರಾದ ಶ್ರೀನಿವಾಸ್‌, ಸಿದ್ದಲಿಂಗಪ್ಪ, ದಾಸಪ್ಪ, ಚಿಕ್ಕಬೈರಯ್ಯ, ಶಿವಕುಮಾರ್ ಹಾಗೂ ಯೋಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.