ತುಮಕೂರು: ನಗರದ ಅಶೋಕ ಹೋಟೆಲ್ನಲ್ಲಿ ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ಕಾಲು ಕತ್ತರಿಸಿ, ತಾನೇ ಆಸ್ಪತ್ರೆಗೆ ದಾಖಲಿಸಲು ಮುಂದಾದ ಘಟನೆ ಬುಧವಾರ ನಡೆದಿದೆ.
ಗದಗ ಮೂಲದ ಬಾಬು ಎಂಬುವರು ಹೆಂಡತಿ ಅನಿತಾ ಅವರ ಕಾಲು ಕತ್ತರಿಸಿದ್ದಾರೆ. ಮಧುಗಿರಿಯ ಅನಿತಾ ಅವರನ್ನು ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು. ವಿವಾಹದ ನಂತರ ಇಬ್ಬರ ಮಧ್ಯೆ ಕೌಟುಂಬಿಕ ಸಮಸ್ಯೆಗಳು ಎದುರಾಗಿದ್ದು, ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.
ಇಬ್ಬರು ಬುಧವಾರ ಬೆಳಿಗ್ಗೆ ಹೋಟೆಲ್ಗೆ ಬಂದು ಕೊಠಡಿ ಪಡೆದಿದ್ದರು. ಹೆಂಡತಿಯನ್ನು ಕೊಲೆ ಮಾಡುವ ಸಂಚಿನಿಂದಲೇ ಹೋಟೆಲ್ಗೆ ಕರೆದುಕೊಂಡು ಬಂದಿದ್ದು, ಬ್ಯಾಗ್ನಲ್ಲಿ ಮಚ್ಚು ತಂದಿದ್ದರು. ಈ ಬಗ್ಗೆ ಅರಿವಿಲ್ಲದ ಅನಿತಾ ಖುಷಿಯಿಂದಲೇ ಬಾಬು ಜತೆ ಬಂದಿದ್ದರು.
ಹೋಟೆಲ್ ಮಾಲೀಕರು ಘಟನೆಯನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಗಾಯಾಳು ಅನಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಬಾಬು ಅವರನ್ನು ವಶಕ್ಕೆ ಪಡೆದಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.