
ಕೊರಟಗೆರೆ: ಪಟ್ಟಣದಲ್ಲಿ ಫೆಬ್ರುವರಿ 23ರಂದು ನಡೆಯುವ ಎರಡನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತಾಲ್ಲೂಕಿನ ಸಾಹಿತಿ ತುಂಬಾಡಿ ರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಾಥಮಿಕ ಶಿಕ್ಷಣವನ್ನು ತುಂಬಾಡಿ ಗೊಲ್ಲಹಳ್ಳಿ, ವಡ್ಡಗೆರೆಯಲ್ಲಿ ಪಡೆದಿದ್ದರು. ಕಾನೂನು ಪದವಿ ಪಡೆದ ಇವರು, ಕಾರ್ಮಿಕ ನಿರೀಕ್ಷಕರಾಗಿ ಕಾರ್ಮಿಕ ಇಲಾಖೆಗೆ ಆಯ್ಕೆಯಾದರು.
ಲೇಖಕ ಹಾಗೂ ದಲಿತ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಮಯ್ಯ ಅವರು ವಿವಿಧ ಗೌರವ ಪ್ರಶಸ್ತಿಗಳು ಸೇರಿದಂತೆ 2025ರ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಅವರ ಆತ್ಮಕಥೆ ‘ಮಣೆಗಾರ’ ಕೃತಿ ಕಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರವಾಗಿದೆ.
ಪ್ರೊ. ಬಿ.ಕೃಷ್ಣಪ್ಪ ನಾಯಕತ್ವದಲ್ಲಿ ಹುಟ್ಟಿಕೊಂಡ ದಸಂಸ ಹೋರಾಟಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡದ್ದರು.
ಅವರ ಪ್ರಮುಖ ಕೃತಿಗಳು: ಮಣೆಗಾರ, ಮುತ್ತಿನಜೋಳ, ದಲಿತ ಕಾರಣ, ಸ್ಪರ್ಶ, ಓದೋರಂಗ, ಜಾಲ್ಗಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.