ಕೊರಟಗೆರೆ (ತುಮಕೂರು ಜಿ): ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬೊಮ್ಮಲದೇವಿಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ರಾಣೋಜಿಪಾಳ್ಯ ಗ್ರಾಮದಲ್ಲಿ ಶನಿವಾರ ಚಿರತೆ ದಾಳಿಯಿಂದ 4 ಮೇಕೆಗಳು ಮೃತಪಟ್ಟಿವೆ.
ಗ್ರಾಮದ ಗಂಗೂಬಾಯಿ ಎಂಬುವರಿಗೆ ಮೇಕೆಗಳು ಸೇರಿದ್ದು ಶನಿವಾರ ತಡರಾತ್ರಿ ಚಿರತೆಯು ಮನೆಯ ಪಕ್ಕದ ರೊಪ್ಪದಲ್ಲಿ ಕಟ್ಟಿದ್ದ 4 ಮೇಕೆಗಳ ಕುತ್ತಿಗೆಗಳನ್ನು ಕಚ್ಚಿ ರಕ್ತ ಹೀರಿದೆ.
₹ 40 ಸಾವಿರ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ಮೇಕೆ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದ ಗಂಗೂಬಾಯಿ ಅವರ ಕುಟುಂಬ ಕಂಗಾಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.