ADVERTISEMENT

ನಿಟ್ಟೂರು: ತೆಂಗಿನ ಮರ ಏರಿದ ಚಿರತೆ!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 5:59 IST
Last Updated 7 ಫೆಬ್ರುವರಿ 2026, 5:59 IST
<div class="paragraphs"><p>ನಿಟ್ಟೂರು ಹೋಬಳಿ ಹಾರನಹಳ್ಳಿಯಲ್ಲಿ ತೆಂಗಿನ ಮರ ಏರಿ ಕುಳಿತಿದ್ದ ಚಿರತೆ</p></div>

ನಿಟ್ಟೂರು ಹೋಬಳಿ ಹಾರನಹಳ್ಳಿಯಲ್ಲಿ ತೆಂಗಿನ ಮರ ಏರಿ ಕುಳಿತಿದ್ದ ಚಿರತೆ

   

ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಹಾರನಹಳ್ಳಿಯಲ್ಲಿ ಶುಕ್ರವಾರ ಚಿರತೆಯೊಂದು ತೆಂಗಿನ ಮರ ಏರಿ ಕುಳಿತು ರೈತರಲ್ಲಿ ಆತಂಕ ಉಂಟು ಮಾಡಿದೆ.

ಜಮೀನಿನ ಮಾಲೀಕರು ತೋಟಕ್ಕೆ ಹೋದ ಸಂದರ್ಭದಲ್ಲಿ ಚಿರತೆಯನ್ನು ಗಮನಿಸಿ ಗ್ರಾಮಸ್ಥರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಜನರು ಗುಂಪು ಸೇರುವುದರೊಳಗೆ ಚಿರತೆ ತೆಂಗಿನ ಮರದಿಂದ ಕೆಳಗೆ ಜಿಗಿದು ಹೋಗಿದೆ.

ADVERTISEMENT

ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಆಯಕಟ್ಟಿನ ಜಾಗದಲ್ಲಿ ಚಿರತೆ ಸೆರೆಹಿಡಿಯಲು ಬೋನು ಇಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.