ತೋವಿನಕೆರೆ: ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ದಿನಗಳಿಂದ ಮಳೆ ಇಲ್ಲದೇ ಬೆಳೆಗಳು ಒಣಗಲು ಪ್ರಾರಂಭವಾಗಿದ್ದು, ರೈತರಲ್ಲಿ ಆತಂಕ ಮೂಡಿಸಿತ್ತು. ಬುಧವಾರ ಸಂಜೆ ಬಿದ್ದ ಮಳೆ ರೈತರಿಗೆ ಸಮಾಧಾನ
ತಂದಿದೆ.
ಸಮಯಕ್ಕೆ ಸರಿಯಾಗಿ ಮಳೆ ಇಲ್ಲದೆ ಶೇಂಗಾ ಬೆಳೆಯ ಇಳುವರಿ ಕುಂಠಿತವಾಗಿದೆ. ರಾಗಿ ಪೈರು ಒಣಗುತ್ತಿದ್ದು ಮೇವಿಗೂ ಬರ ಬರುವ ಸ್ಥಿತಿ ನಿರ್ಮಾಣವಾಗಿತ್ತು.
ಸಂಜೆ 15 ನಿಮಿಷ ಕಾಲ ಮಳೆ ಸುರಿಯಿತು. ಬೆಳೆಗಳಿಗೆ ತಾತ್ಕಾಲಿಕವಾಗಿ ಟಾನಿಕ್ ಸಿಕ್ಕಿದಂತಾಗಿದೆ. ಕೃಷಿಕರು, ಹೈನು ಗಾರರಿಗೆ ಸ್ವಲ್ಪ ನೆಮ್ಮದಿ ಮೂಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.