ADVERTISEMENT

ಮಠಕ್ಕೆ ಬಂದ ಸ್ವಾಮೀಜಿ, ಭಕ್ತರಿಗೆ ಒಂದು ವಾರ ದರ್ಶನವಿಲ್ಲ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 13:23 IST
Last Updated 3 ಡಿಸೆಂಬರ್ 2018, 13:23 IST
ಹಳೇ ಮಠದತ್ತ ಸ್ವಾಮೀಜಿ ಅವರನ್ನು ಕರೆ ತರುತ್ತಿರುವುದು
ಹಳೇ ಮಠದತ್ತ ಸ್ವಾಮೀಜಿ ಅವರನ್ನು ಕರೆ ತರುತ್ತಿರುವುದು   

ತುಮಕೂರು: ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಸೋಮವಾರ ಮಧ್ಯಾಹ್ನ ಮಠಕ್ಕೆ ಮರಳಿದರು.

11 ಗಂಟೆಗೆ ಆಸ್ಪತ್ರೆಯಿಂದ ಬಿಡುಗಡೆಯಾದರು. ಮಠಕ್ಕೆ ಬಂದ ಅವರನ್ನು ನಿಧಾನವಾಗಿ ಕಾರಿನಿಂದ ಇಳಿಸಲಾಯಿತು. ಸಹಾಯಕರು ಹಾಗೂ ಸ್ವಾಮೀಜಿ ಅವರ ನೆರವಿನಲ್ಲಿ ನಿಧಾನವಾಗಿ ಹಳೇ ಮಠದತ್ತ ಬಂದರು. ಸ್ವಾಮೀಜಿ ಅವರು ಮಠಕ್ಕೆ ಬರುವುದನ್ನು ತಿಳಿದ ಭಕ್ತರು ಅವರ ಬರುವಿಕೆಗಾಗಿ ಕಾಯುತ್ತಿದ್ದರು. ಆರೋಗ್ಯದ ದೃಷ್ಟಿ ಮತ್ತು ವಿಶ್ರಾಂತಿ ಪಡೆಯಬೇಕಾದ ಕಾರಣ ಒಂದು ವಾರ ಸ್ವಾಮೀಜಿ ಅವರ ದರ್ಶನ ಭಾಗ್ಯ ಭಕ್ತರಿಗೆ ಇರುವುದಿಲ್ಲ.

ಸ್ವಾಮೀಜಿ ಮಠಕ್ಕೆ ಬರುವುದು ಮಕ್ಕಳಲ್ಲಿಯೂ ಸಂಭ್ರಮಕ್ಕೆ ಕಾರಣವಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.