ADVERTISEMENT

Video | ಹುಣಸೆ ವಹಿವಾಟು ಶುರು: ಇಳುವರಿ ಕುಸಿತ, ದರದಲ್ಲಿ ಏರಿಳಿತ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 12:31 IST
Last Updated 29 ಫೆಬ್ರುವರಿ 2024, 12:31 IST

ರಾಜ್ಯದಲ್ಲಿಯೇ ದೊಡ್ಡ ಹುಣಸೆ ಮಾರುಕಟ್ಟೆಯಾದ ತುಮಕೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಸಕ್ತ ಋತುವಿನ ಹುಣಸೆ ವಹಿವಾಟು ಶುರುವಾಗಿದ್ದು, ಗುಣಮಟ್ಟದ ಹುಣಸೆಗೆ ಉತ್ತಮ ದರ ಸಿಗುತ್ತಿದೆ. ಹುಣಸೆ ಬೆಳೆಗಾರರು ಉತ್ಸಾಹದಿಂದಲೇ ಮಾರುಕಟ್ಟೆಯತ್ತ ಬರುತ್ತಿದ್ದಾರೆ. ಕಳೆದ ವರ್ಷ ಮಳೆ ಕೊರತೆಯಿಂದ ಈ ಬಾರಿ ಇಳುವರಿ ಕುಸಿತವಾಗಿದ್ದು, ಹುಣಸೆ ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ.ಅಲ್ಲದೆ, ಮರದಿಂದ ಹಣ್ಣು ಕಿತ್ತು ಸಿಪ್ಪೆ, ಬೀಜ, ನಾರು ಬೇರ್ಪಡಿಸಿ ಮಾರುಕಟ್ಟೆಗೆ ತರಬೇಕು. ಮರ ಹತ್ತಿ ಕಾಯಿ ಬಿಡಿಸಲು ಜನ ಸಿಗುತ್ತಿಲ್ಲ ಎಂಬ ಅಳಲು ಹುಣಸೆ ಬೆಳೆಗಾರರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.