ADVERTISEMENT

ಶಾಲಾ ಬಾಗಿಲು ಮುರಿದ ಕರಡಿ!

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 1:20 IST
Last Updated 26 ಜನವರಿ 2021, 1:20 IST
ಪಾವಗಡ ತಾಲ್ಲೂಕು ಮದ್ದಿಬಂಡೆ ಗ್ರಾಮದ ಸರ್ಕಾರಿ ಶಾಲೆಯ ಬಾಗಿಲು ಕರಡಿಗಳ ದಾಳಿಯಿಂದ ಹಾಳಾಗಿರುವುದು
ಪಾವಗಡ ತಾಲ್ಲೂಕು ಮದ್ದಿಬಂಡೆ ಗ್ರಾಮದ ಸರ್ಕಾರಿ ಶಾಲೆಯ ಬಾಗಿಲು ಕರಡಿಗಳ ದಾಳಿಯಿಂದ ಹಾಳಾಗಿರುವುದು   

ಪಾವಗಡ: ತಾಲ್ಲೂಕಿನ ಮದ್ದಿಬಂಡೆ ಗ್ರಾಮದಲ್ಲಿ ಭಾನುವಾರ ರಾತ್ರಿ ಕರಡಿಗಳು ಸರ್ಕಾರಿ ಶಾಲೆ ಬಾಗಿಲು ಮುರಿದು ಸಾಮಗ್ರಿಗಳನ್ನು ಹಾಳು ಮಾಡಿವೆ.

ಗ್ರಾಮದ ಚಾಮುಂಡೇಶ್ವರಿ ದೇಗುಲದ ಬಳಿ ಎರಡು ಕರಡಿಗಳು ಅಲ್ಲಿದ್ದ ಕೆಲ ಸಾಮಗ್ರಿಗಳನ್ನು ನಾಶಪಡಿಸಿವೆ. ನಂತರ ಗ್ರಾಮದ ಸರ್ಕಾರಿ ಶಾಲೆಯ ಬಾಗಿಲು ಮುರಿದು ಒಳನುಗ್ಗಿವೆ. ಶಾಲೆಯಲ್ಲಿದ್ದ ಸಾಮಗ್ರಿಗಳನ್ನು ಹಾಳು ಮಾಡಿ ಬೆಳಗಿನ ಜಾವ ಸ್ಥಳದಿಂದ ನಿರ್ಗಮಿಸಿವೆ.

ಸಂಜೆಯಾದರೆ ಜಮೀನಿಗೆ ಹೋಗಲು ಭಯಪಡಬೇಕಿದೆ. ಹೊರವಲಯದ ಮನೆಗಳ ಜನತೆ ರಾತ್ರಿ ಮನೆಯಿಂದ ಹೊರಬರಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.