ADVERTISEMENT

ತುಮಕೂರು: ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 9:01 IST
Last Updated 20 ಫೆಬ್ರುವರಿ 2021, 9:01 IST
   

ತುಮಕೂರು: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿ ಲಕ್ಷ್ಮಿಪುರದಲ್ಲಿ ಗ್ರಾಮ ವಾಸ್ತವ್ಯಕ್ಕಾಗಿ ಭೇಟಿ ನೀಡಿದ ವೇಳೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.

ಮೊದಲಿಗೆ ಜಿಲ್ಲಾಧಿಕಾರಿ ರಾಸುಗಳಿಗೆ ಜ್ವರ ನಿವಾರಣೆ ಲಸಿಕೆ ಹಾಕಿದರು‌. ನಂತರ ಕೃಷಿ, ಪಶುಪಾಲನೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಗ್ರಾಮದಲ್ಲಿ ರೂಪಿಸಿರುವ ಮಾಹಿತಿ ಘಟಕವನ್ನು ವೀಕ್ಷಿಸಿದರು.

ಜನರಿಂದ ದೂರು‌ ಮತ್ತು ಮನವಿ ಸ್ವೀಕರಿಸಲು ಕೌಂಟರ್ ತೆರೆಯಲಾಗಿದೆ. ಇಲ್ಲಿಗೆ ಲಿಖಿತವಾಗಿ ದೂರುಗಳನ್ನು ಜನರು ಸಲ್ಲಿಸುತ್ತಿದ್ದು ನಂತರ ಅವುಗಳು ಆಯಾ ಇಲಾಖೆಗಳಿಗೆ ರವಾನೆ ಆಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.