ADVERTISEMENT

ತುಮಕೂರು: ಬೆಳಿಗ್ಗೆ ನಾಲ್ಕು ಕೆಎಸ್‌ಆರ್‌ಟಿಸಿ ಬಸ್ ಸಂಚಾರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 4:11 IST
Last Updated 14 ಡಿಸೆಂಬರ್ 2020, 4:11 IST
ತುಮಕೂರಿನಲ್ಲಿ ಆರಂಭಗೊಂಡಿರುವ ಬಸ್‌ ಸಂಚಾರ
ತುಮಕೂರಿನಲ್ಲಿ ಆರಂಭಗೊಂಡಿರುವ ಬಸ್‌ ಸಂಚಾರ   

ತುಮಕೂರು: ಪೊಲೀಸ್ ಭದ್ರತೆಯಲ್ಲಿ ಬೆಳಿಗ್ಗೆ ತುಮಕೂರು ಬಸ್ ನಿಲ್ದಾಣದಿಂದ ಬೆಂಗಳೂರಿಗೆ ನಾಲ್ಕು ಬಸ್ ಗಳು ತೆರಳಿದವು.

ಪ್ರಯಾಣಿಕರ ಸಂಖ್ಯೆ ಬಸ್ ನಿಲ್ದಾಣದಲ್ಲಿ ಹೆಚ್ಚುತಿದೆ. ಕೆಎಸ್ಆರ್ಟಿಸಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ನಿಲ್ದಾಣದಲ್ಲಿ ಪಹರೆ ಇದ್ದಾರೆ.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ.

ADVERTISEMENT

ರಾತ್ರಿ ಕುಣಿಗಲ್ ನಿಂದ ಬಂದ ಬಸ್ ಗಳನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ತುಮಕೂರು ಘಟಕದಿಂದ ಯಾವುದೇ ಬಸ್ ಗಳು ತೆರಳಿಲ್ಲ ಎಂದು ಕೆಎಸ್ಆರ್ಟಿಸಿ ಸಿಬ್ಬಂದಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಕಚೇರಿ ಬಳಿ ಕೆಎಸ್ಆರ್‌ಟಿಸಿಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.