ADVERTISEMENT

ಬಸ್‌ಗೆ ಕಲ್ಲು ತೂರಿದ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 5:39 IST
Last Updated 13 ಏಪ್ರಿಲ್ 2021, 5:39 IST

ಮಧುಗಿರಿ: ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಬಿಎಂಟಿಸಿ ಬಸ್ ಚಾಲಕ ಕಲ್ಲು ತೂರಿದ ಘಟನೆ ತಾಲ್ಲೂಕಿನ ಬಸವನಹಳ್ಳಿಯ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಸಮೀಪ ಭಾನುವಾರ ರಾತ್ರಿ ನಡೆದಿದೆ.

ಮಧುಗಿರಿಯಿಂದ ಬಸ್ ಡಿಪೊಗೆ ಹೋಗುತ್ತಿದ್ದ ಹಾಗೂ ಪಾವಗಡ ಮಾರ್ಗವಾಗಿ ಮಧುಗಿರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಬಿಎಂಟಿಸಿ ಬಸ್ ಚಾಲಕ ಮಲ್ಲಘಂಡ ಸಿಂಗ್ರಿ, ಬಸವನಹಳ್ಳಿಯ ನಟರಾಜು ಹಾಗೂ ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿ ಸೇರಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ.

ಈ ಘಟನೆಯಿಂದ ಬಸ್‌ನ ಗಾಜು ಪುಡಿ ಪುಡಿಯಾಗಿದೆ. ಚಾಲಕರಾದ ನಾಗೇಶ್ ‌ಮತ್ತು ಹನುಮಂತರಾಯಪ್ಪ ನೀಡಿದ ದೂರಿನ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.