ADVERTISEMENT

ದೋಣಿ ಮುಳುಗಡೆ: ಓರ್ವ ನಾಪತ್ತೆ, ಐವರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 17:02 IST
Last Updated 11 ಅಕ್ಟೋಬರ್ 2020, 17:02 IST

ಪಡುಬಿದ್ರಿ (ಉಡುಪಿ): ಇಲ್ಲಿನ ಹೆಜಮಾಡಿಯಿಂದ ಭಾನುವಾರ ಮೀನುಗಾರಿಕೆಗೆ ತೆರಳಿದ್ದ ದೋಣಿ ಸಮುದ್ರದಲ್ಲಿ ಮುಳುಗಿದ್ದು, ಓರ್ವ ಮೀನುಗಾರ ನಾಪತ್ತೆಯಾಗಿದ್ದು, ಐವರನ್ನು ರಕ್ಷಣೆ ಮಾಡಲಾಗಿದೆ.

ಹೆಜಮಾಡಿಯ ಅಳಿವೆ ಬಳಿ ದುರ್ಘಟನೆ ನಡೆದಿದ್ದು, ಹೆಜಮಾಡಿ ಕೋಡಿಯ ಸುಖೇಶ್ (25) ನಾಪತ್ತೆಯಾದ ಮೀನುಗಾರರ. ಏಕನಾಥ ಕರ್ಕೇರ, ನಾಗೇಶ್, ಪಾಂಡುರಂಗ, ನೀರಜ್, ರಾಜೇಶ್ ಅವರನ್ನು ರಕ್ಷಣೆ ಮಾಡಲಾಗಿದೆ.

ಕೋಡಿಯ ಏಕನಾಥ ಕರ್ಕೇರ ಅವರ ಯಾಂತ್ರಿಕೃತ ದೋಣಿ ಮೀನುಗಾರಿಕೆಮುಗಿಸಿ ಹಿಂದಿರುಗುತ್ತಿದ್ದಾಗ ಸಮುದ್ರದ ಅಲೆಗಳ ಒತ್ತಡಕ್ಕೆ ಸಿಲುಕಿ ಮುಳುಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.