ADVERTISEMENT

ಉಡುಪಿ: ​ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್‌ ಮುಳುಗಡೆ, ಮೀನುಗಾರರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 12:17 IST
Last Updated 19 ಏಪ್ರಿಲ್ 2022, 12:17 IST
​ಮಲ್ಪೆ ಬೀಚ್‌
​ಮಲ್ಪೆ ಬೀಚ್‌   

ಉಡುಪಿ: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್‌ ಮಹಾರಾಷ್ಟ್ರದ ರತ್ನಗಿರಿ ಭಾಗದಲ್ಲಿ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ 7 ಮೀನುಗಾರರನ್ನು ರಕ್ಷಿಸಲಾಗಿದೆ.

ಭಗವಾನ್ ದಾಸ್ ಕೋಟ್ಯಾನ್ ಅವರ ದಿವ್ಯಶಕ್ತಿ ಹೆಸರಿನ ಬೋಟ್‌ ಏ.10ರಂದು ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮಾಡುವಾಗ ಬೋಟ್‌ನ ತಳಭಾಗ‌ ಅಪಘಾತಕ್ಕೆ ತುತ್ತಾಗಿ ಮುಳುಗಡೆಯಾಗಿದ್ದು, ಹತ್ತಿರದಲ್ಲಿದ್ದ ಇತರ ಬೋಟ್‌ಗಳವರು ನೆರವಿಗೆ ಧಾವಿಸಿ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.

ಮೀನುಗಾರರನ್ನು ಮಲ್ಪೆ ಬಂದರಿಗೆ ಕರೆತರಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.