ADVERTISEMENT

ಉಡುಪಿ: ₹ 50 ಲಕ್ಷ ಮೌಲ್ಯದ ಚಿನ್ನ ದರೋಡೆ

ಚಾಕು ತೋರಿಸಿ ಚಿನ್ನ ಕಸಿದು ಪರಾರಿ

​ಪ್ರಜಾವಾಣಿ ವಾರ್ತೆ
Published 25 ಮೇ 2020, 12:12 IST
Last Updated 25 ಮೇ 2020, 12:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಚಿನ್ನದ ವ್ಯಾಪಾರಿಯೊಬ್ಬರಿಗೆ ಚಾಕು ತೋರಿಸಿದ ದರೋಡೆಕೋರರು ಅಂದಾಜು ₹ 50 ಲಕ್ಷ ಮೌಲ್ಯದ 1 ಕೆಜಿ 270 ಗ್ರಾಂ ಚಿನ್ನವನ್ನು ದೋಚಿದ್ದಾರೆ.

ಚಿನ್ನದ ವ್ಯಾಪಾರಿ ವಿಜಯ್ ಜಾಧವ್ ಚಿನ್ನ ಕಳೆದುಕೊಂಡವರು.ಸೋಮವಾರ ಬೆಳಗಿನ ಜಾವ 5.30ಕ್ಕೆ ಬೀಡಿನಗುಡ್ಡೆಯಲ್ಲಿರುವ ಲಕ್ಷ್ಮೀ ಟ್ರೇಡ್‌ ಸೆಂಟರ್‌ಗೆ ಹೋಗುವಾಗ ಬೈಕ್‌ನಲ್ಲಿ ಮಾಸ್ಕ್ ಹಾಗೂ ಹೆಲ್ಮೆಟ್‌ ಧರಿಸಿ ಬಂದ ದುಷ್ಕರ್ಮಿಗಳು ವಿಜಯ್‌ಗೆ ಜೀವ ಬೆದರಿಕೆ ಹಾಕಿ ಚಿನ್ನ ಕಸಿದು ಪರಾರಿಯಾಗಿದ್ದಾರೆ.

ವಿಜಯ್‌ ಹಳೆಯ ಚಿನ್ನವನ್ನು ಸಂಗ್ರಹಿಸಿ ಕರಗಿಸಿ ಶುದ್ಧ ಚಿನ್ನವನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಉಡುಪಿ ನಗರ ಠಾಣೆ ಪಿಎಸ್‌ಐ ಶಕ್ತಿವೇಲು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.